ಈ ಮೂರೂ ಕೃತಿಗಳನ್ನು ‘ಚಿಂತನ ಪುಸ್ತಕ’ ಪ್ರಕಟಿಸಿದೆ. ಬೆಂಗಳೂರು ಹಿಸ್ಟೋರಿಯನ್ಸ್ ಸೊಸೈಟಿ, ಇತಿಹಾಸ ದರ್ಪಣ ಹಾಗೂ ಋತುಮಾನ.ಕಾಮ್ ಸಹಯೋಗದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಜೆ 5ಕ್ಕೆ ಪ್ರಾರಂಭವಾಗಲಿರುವ ಈ ಕಾರ್ಯಕ್ರಮದಲ್ಲಿ ಡಾ.ಎಸ್. ಚಂದ್ರಶೇಖರ, ಡಾ.ಎಸ್.ಕೆ. ಅರುಣಿ, ಡಾ.ಎಸ್.ಪಿ. ವಾಗೀಶ್ವರಿ ಕೃತಿಗಳ ಬಗ್ಗೆ ಮಾತನಾಡಲಿದ್ದಾರೆ.