ಬೆಂಗಳೂರು: ಕರ್ನಾಟಕ ಬೋವಿ ಅಭಿ ವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಬಿ.ಎಂ. ನಾಗರಾಜಪ್ಪ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಗುರುವಾರ ದಾಳಿ ನಡೆಸಿದ್ದು ಭಾರಿ ಪ್ರಮಾಣದ ಆಸ್ತಿಯನ್ನು ಪತ್ತೆ ಮಾಡಿದೆ.
ವಿಜಯನಗರದ ಅವರ ನಿವಾಸ, ಸಹೋದರನ ಮನೆ, ಮಾಗಡಿ ರಸ್ತೆ ಸನ್ಫ್ಲವರ್ ಅಪಾರ್ಟ್ಮೆಂಟ್ ಸಮುಚ್ಚಯದಲ್ಲಿರುವ ಅವರ ಪರಿಚಿತರ ಮನೆ, ಹೊಸಕೋಟೆ ತಾಲ್ಲೂಕು ಬೆನ್ನಿಗಾನಹಳ್ಳಿಯಲ್ಲಿನ ವಾಸದ ಮನೆ, ಚನ್ನಪಟ್ಟಣ ತಾಲ್ಲೂಕಿನ ಹಾರೋಕೊಪ್ಪೆಯ ವಾಸದ ಮನೆಗಳ ಮೇಲೆ ಏಕಕಾಲದಲ್ಲಿ ಅಧಿಕಾರಿಗಳು ದಾಳಿ ನಡೆಸಿದರು.
ಸನ್ಫ್ಲವರ್ ಅಪಾರ್ಟ್ಮೆಂಟ್ ಸಮುಚ್ಚಯದಲ್ಲಿ ಒಂದು ಫ್ಲ್ಯಾಟ್, ವಿಜಯನಗರ ಎಂ.ಸಿ.ಲೇಔಟ್ನಲ್ಲಿ ಮನೆ, ಒಂದು ಕಾರು, ದ್ವಿಚಕ್ರ ವಾಹನ, ₹26 ಸಾವಿರ ಬೆಲೆಯ ಗೃಹೋಪಯೋಗಿ ವಸ್ತುಗಳನ್ನು ಹೊಂದಿರುವುದು ಹಾಗೂ ಬೇನಾಮಿ ಹೆಸರಿನಲ್ಲಿ ₹29.40 ಲಕ್ಷ ಠೇವಣಿ ಇಟ್ಟಿರುವುದು ಪತ್ತೆಯಾಗಿದೆ.