<p><strong>ಬೆಂಗಳೂರು:</strong> ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿದು, ಏಳು ಜನರ ಜೀವ ಕಸಿದುಕೊಂಡು ಎಂಟು ದಿನವಾಗಿದ್ದರೂ ಸ್ಥಳದಲ್ಲಿ ಇನ್ನೂ ಆತಂಕ ಮನೆಮಾಡಿದೆ. ಇಲ್ಲಿನ ಬೀದಿ ಬದಿಯ ವ್ಯಾಪಾರವನ್ನೇ ನಂಬಿಕೊಂಡಿದ್ದವರ ಬದುಕು ಅತಂತ್ರವಾಗಿದೆ.</p>.<p>ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಗೋಡೆಯ ಸಮೀಪ 15–20 ವರ್ಷದಿಂದ ವ್ಯಾಪಾರ ನಡೆಸುತ್ತಿದ್ದವರನ್ನು ಅಲ್ಲಿಂದ ತೆರವುಗೊಳಿಸಿದ ಮೇಲೆ ಸೂಕ್ತ ಜಾಗವಿಲ್ಲದೇ ಸಿಕ್ಕ ಸ್ಥಳದಲ್ಲೇ ವಹಿವಾಟು ನಡೆಸುತ್ತಿದ್ದಾರೆ. ನಿತ್ಯದ ಆದಾಯಕ್ಕೆ ಹೊಡೆತ ಬಿದ್ದಿರುವ ಜೊತೆಗೆ ಮುಂದೆ ಏನಾಗಲಿದೆಯೋ ಎನ್ನುವ ದುಗುಡವೂ ಅವರ ಮನಸಿನಲ್ಲಿದೆ.</p>.<p>ಸದಾ ಜನಜಂಗುಳಿ ಇರುವ ಬೌರಿಂಗ್ ಆಸ್ಪತ್ರೆ ಸುತ್ತಮುತ್ತಲಿನ ಜಾಗದಲ್ಲಿ ಸಾವಿರಾರು ಮಂದಿ ಸಂಚರಿಸುತ್ತಾರೆ. ಕೆಲವರು ಆಸ್ಪತ್ರೆಗೆ, ಇನ್ನಷ್ಟು ಮಂದಿ ಚರ್ಚ್, ದೇವಸ್ಥಾನಗಳಿಗೂ ಬರುವವರೂ ಇದ್ದಾರೆ. ವಹಿವಾಟಿನ ಕಾರಣಕ್ಕೂ ಈ ಭಾಗ ಜನಸಂದಣಿ ಪ್ರದೇಶವಾಗಿ ಮಾರ್ಪಟ್ಟಿದೆ. ಅಕ್ಕಪಕ್ಕದಲ್ಲಿ ವಾಸಿಸುವರಿಗೆ ನಿತ್ಯ ಸಂಚಾರಕ್ಕೆ ಇದೇ ಮುಖ್ಯ ಮಾರ್ಗವಾಗಿದೆ. </p>.<p>ದುರ್ಘಟನೆ ಬಳಿಕ ಆ ರಸ್ತೆಯ ಎರಡೂ ಬದಿಗಳಲ್ಲಿ ವ್ಯಾಪಾರಿಗಳನ್ನು ಸಂಪೂರ್ಣ ತೆರವು ಮಾಡಲಾಗಿದೆ. ಕಾಂಪೌಂಡ್ ಕುಸಿದ ಸ್ಥಳದಲ್ಲಿ ಮರಳಿನ ಮೂಟೆಗಳನ್ನು ಜೋಡಿಸಿ, ಇನ್ನಷ್ಟು ಮಣ್ಣು ಕುಸಿಯದಂತೆ ಎಚ್ಚರಿಕೆ ವಹಿಸಲಾಗಿದೆ. ಉಳಿದಿರುವ ಗೋಡೆಯ ಉದ್ದಕ್ಕೂ ಹಳದಿ ಪಟ್ಟಿಯನ್ನು ಅಳವಡಿಸಿ, ಜನರು ಅಲ್ಲಿ ಸಂಚರಿಸದಂತೆ ನಿರ್ಬಂಧಿಸಲಾಗಿದೆ.</p>.<p>ಸ್ಥಳೀಯರಲ್ಲದೆ ಹೊರ ರಾಜ್ಯದ ವ್ಯಾಪಾರಿಗಳು, ನಾನಾ ಭಾಗಗಳ ಪಾದಚಾರಿಗಳು ದುರಂತ ನಡೆದ ಅವಶೇಷದ ಮುಂದೆಯೇ ನಿತ್ಯ ನಡೆದುಕೊಂಡು ಹೋಗುತ್ತಾರೆ. ಕುಸಿದಿರುವ ಗೋಡೆ ಅವರಲ್ಲಿ ಭೀತಿ ಮೂಡಿಸುತ್ತಿದೆ.</p>.<p>‘ಏಳೆಂಟು ವರ್ಷಗಳಿಂದ ಗೋಡೆ ಬದಿಯಲ್ಲಿಯೇ ವ್ಯಾಪಾರ ಮಾಡಿಕೊಂಡಿದ್ದೆ. ದುರಂತ ಸ್ಥಳದಿಂದ ನನ್ನ ಮಳಿಗೆ ದೂರವಿತ್ತು. ಆದರೂ ಅನಾಹುತ ಆಗಬಹುದು ಎಂದು ತೆರವುಗೊಳಿಸಿದ್ದಾರೆ. ಇದರಿಂದ ಚರ್ಚ್ ಸಮೀಪದ ರಸ್ತೆಯಲ್ಲಿ ಕುಳಿತು ವ್ಯಾಪಾರ ಮಾಡುತ್ತಿದ್ದೇನೆ. ಹಿಂದೆ ದಿನಕ್ಕೆ ₹1 ಸಾವಿರವರೆಗೂ ವ್ಯಾಪಾರವಾಗುತ್ತಿತ್ತು. ಈಗ ₹400ರಿಂದ ₹500ಕ್ಕೆ ಇಳಿಕೆಯಾಗಿದೆ. ಬೇಗನೆ ಗೋಡೆ ನಿರ್ಮಿಸಿ ನಮಗೆ ಅಲ್ಲಿ ಸುರಕ್ಷಿತ ಜಾಗ ಒದಗಿಸಿದರೆ ಒಳ್ಳೆಯದಾಗಲಿದೆ’ ಎಂದು ತಮಿಳುನಾಡು ಮೂಲದ ವ್ಯಾಪಾರಿ ಸರೋಜ ಹೇಳಿದರು.</p>.<p><strong>ಮರದ ಕೊಂಬೆ ತೆರವಿಲ್ಲ:</strong> ಘಟನೆ ನಡೆದ ಸ್ಥಳದಿಂದ ಅನತಿ ದೂರದಲ್ಲಿಯೇ ಆಸ್ಪತ್ರೆಯ ಶವಾಗಾರವೂ ಇದೆ. ಅಲ್ಲಿಂದ ಮುಂದೆಕ್ಕೆ 300 ಮೀಟರ್ವರೆಗೂ ಇರುವ ಗೋಡೆಯೂ ಶಿಥಿಲಗೊಂಡಿದೆ. ಪಕ್ಕದಲ್ಲಿ ವೈದ್ಯರು, ಸಿಬ್ಬಂದಿ ವಸತಿಗೃಹವಿದೆ. ಅಲ್ಲಿನ ಆವರಣದ ಗೋಡೆಯೂ ಹಳೆಯದಾಗಿದೆ. ಆ ಭಾಗದಲ್ಲಿ ಮರದ ಕೊಂಬೆಗಳು ಗಾಳಿಗೆ ಮುರಿದುಬಿದ್ದಿದ್ದು, ಅವುಗಳನ್ನು ತೆರವುಗೊಳಿಸಿಲ್ಲ. ಜನ ಸಂಚರಿಸದಂತೆ ಪೊಲೀಸರು ಕ್ರಮ ಕೈಗೊಂಡಿದ್ದರೂ ಕೆಲವರು ಅಲ್ಲಿಯೇ ವಾಹನ ನಿಲ್ಲಿಸುತ್ತಿದ್ದಾರೆ. </p>.<p>‘ಎಂಟು ದಿನಗಳ ಹಿಂದೆ ಭಾರಿ ಮಳೆ ಬಂದು ಇಲ್ಲಿ ಮರದ ಕೊಂಬೆಗಳೆಲ್ಲಾ ಬಿದ್ದಿವೆ. ಗೋಡೆ ಕುಸಿದು ದುರಂತ ಸಂಭವಿಸಿದೆ. ಒಂದು ಭಾಗದಲ್ಲಿ ಬಿದ್ದ ಮರದ ಕೊಂಬೆಗಳನ್ನು ರಸ್ತೆಯಲ್ಲೇ ಬಿಟ್ಟಿದ್ದಾರೆ. ಇದನ್ನು ತೆರವು ಮಾಡಲಿ’ ಎಂದು ಚರ್ಚ್ ಮುಂಭಾಗದಲ್ಲಿಯೇ 15 ವರ್ಷದಿಂದ ಹಣ್ಣಿನ ರಸ ಮಾರಾಟ ಮಾಡುವ ಖಲೀಲ್ ಹೇಳಿದರು.</p>.<p><strong>ಪೊಲೀಸ್ ಸಂಚಾರ:</strong> ಘಟನೆ ನಂತರ ಪೊಲೀಸ್ ಗಸ್ತನ್ನು ಇಲ್ಲಿ ಹೆಚ್ಚಿಸಲಾಗಿದೆ. ವ್ಯಾಪಾರಸ್ಥರು ಪಾದಚಾರಿ ಮಾರ್ಗಕ್ಕೆ ಮರಳದಂತೆ ಸಂಚಾರ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೂಚನೆ ನೀಡುತ್ತಿದ್ದಾರೆ. ಆಸ್ಪತ್ರೆಯ ಭದ್ರತಾ ಸಿಬ್ಬಂದಿಯೂ ಜನ ಗೋಡೆಯ ಬದಿಯಲ್ಲಿ ನಿಲ್ಲದಂತೆ ಮನವಿ ಮಾಡುತ್ತಿದ್ದಾರೆ. ಆದರೆ, ಆಸ್ಪತ್ರೆಯ ಮುಂಭಾಗ, ಮತ್ತೊಂದು ಬದಿಯ ಗೋಡೆಯ ಪಕ್ಕದಲ್ಲಿ ಪಾದಚಾರಿಗಳ ಸಂಚಾರ, ವಹಿವಾಟು ಯಥಾರೀತಿಯಿದೆ.</p>.<p>‘ದುರಂತ ನಡೆದ ಒಂದು ರಸ್ತೆಯಲ್ಲಿ ವ್ಯಾಪಾರಿಗಳನ್ನು ಸ್ಥಳಾಂತರಿಸಲಾಗಿದೆ. ಚರ್ಚ್ ಪಕ್ಕದಲ್ಲೂ ವ್ಯಾಪಾರಕ್ಕೆ ಅವಕಾಶ ನೀಡಿಲ್ಲ. ಕೆಲವರು ಬಂದು ವ್ಯಾಪಾರ ಮಾಡಲು ಯತ್ನಿಸಿದರೂ ದೂರ ಹೋಗುವಂತೆ ಅವರಿಗೆ ಸೂಚನೆ ನೀಡುತ್ತಿದ್ದೇವೆ. ಪಾದಚಾರಿಗಳೂ ಎಚ್ಚರ ವಹಿಸಿ ಗೋಡೆ ಪಕ್ಕ ಹೋಗದಂತೆ ತಿಳಿಸಿ ಸಂಚಾರ ದಟ್ಟಣೆಯಾಗದಂತೆ ತಡೆಯುತ್ತಿದ್ದೇವೆ’ ಎಂದು ಸಂಚಾರ ಪೊಲೀಸರೊಬ್ಬರು ಹೇಳಿದರು.</p>.<div><blockquote>ಗೋಡೆ ಕುಸಿದ ಮರುದಿನವೇ ಇಲ್ಲಿಂದ ಹೋಗುವಂತೆ ಹೇಳಿದರು. ಹತ್ತಿರದಲ್ಲೇ ವ್ಯಾಪಾರ ಮಾಡಿಕೊಂಡಿದ್ದೇನೆ. ಆದಾಯ ಕಡಿಮೆಯಾಗಿದೆ ನಮ್ಮ ಕಷ್ಟವನ್ನು ಯಾರಿಗೆ ಹೇಳುವುದು? </blockquote><span class="attribution">ಶಂಕರ್ ಬಟ್ಟೆ ವ್ಯಾಪಾರಿ</span></div>.<div><blockquote>ಘಟನೆ ನಡೆದ ಇನ್ನೊಂದು ಬದಿಯಲ್ಲಿ ವಿದ್ಯಾರ್ಥಿಗಳು ಆಟವಾಡಲು ವ್ಯವಸ್ಥೆ ಮಾಡಲಾಗಿತ್ತು. ಈಗ ಯಾರನ್ನೂ ಇಲ್ಲಿ ಆಟವಾಡಲು ಬಿಡದಂತೆ ಸೂಚಿಸಿದ್ದಾರೆ. </blockquote><span class="attribution">ಆಸ್ಪತ್ರೆ ಭದ್ರತಾ ಸಿಬ್ಬಂದಿ</span></div>.<h2> ಮಣ್ಣು ಸುರಿದವರು ಯಾರು? </h2>.<p>ಮಣ್ಣು ಸುರಿದಿದ್ದರಿಂದಲೇ ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿದಿರುವುದು ಸ್ಪಷ್ಟವಾಗಿದ್ದರೂ ಅದನ್ನು ಯಾರು ಅಲ್ಲಿ ಸುರಿದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಗೋಡೆ ದುರಂತದ ಕುರಿತು ತನಿಖೆಗೆ ಮೂರು ಪ್ರತ್ಯೇಕ ಸಮಿತಿ ರಚಿಸಲಾಗಿದ್ದು ಎಲ್ಲ ಸಮಿತಿಗಳೂ ಸ್ಥಳಕ್ಕೆ ಭೇಟಿ ನೀಡಿ ಈಗಾಗಲೇ ಮಾಹಿತಿಯನ್ನು ಸಂಗ್ರಹಿಸಿವೆ. ‘ಮಣ್ಣು ಸಂಗ್ರಹದಿಂದಲೇ ಗೋಡೆ ಕುಸಿತ ಕಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹಿಂದಿದ್ದ ಕಟ್ಟಡವನ್ನು ತೆರವುಗೊಳಿಸಿದ ಮಣ್ಣೋ ಅಥವಾ ಹೊಸ ಕಾಮಗಾರಿ ವೇಳೆಯಲ್ಲಿ ಹಾಕಿರುವ ಮಣ್ಣೋ ಎಂಬುದು ಸಮಿತಿಗಳಿಗೆ ಸ್ಪಷ್ಟವಾಗಿಲ್ಲ’ ಎಂದು ಮೂಲಗಳು ತಿಳಿಸಿವೆ. ‘</p><p>ದುರಂತ ನಡೆದ ಭಾಗದ ಗೋಡೆ ಗುಣಮಟ್ಟದಿಂದ ಕೂಡಿಲ್ಲ. ಇದನ್ನು ಸಂಪೂರ್ಣವಾಗಿ ಬದಲಿಸಿ ಸುಸಜ್ಜಿತ ಗೋಡೆಯನ್ನು ತುರ್ತಾಗಿ ನಿರ್ಮಿಸುವಂತೆ ಸಮಿತಿಗಳು ಶಿಫಾರಸು ಮಾಡಬಹುದು’ ಎನ್ನಲಾಗಿದೆ. ‘ನಗರ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿ ಲೋಕಾಯುಕ್ತ ಅಧಿಕಾರಿ ನೇತೃತ್ವದ ತನಿಖಾ ತಂಡ ಅಧೀಕ್ಷಕ ಎಂಜಿನಿಯರ್ ನೇತೃತ್ವದ ತಾಂತ್ರಿಕ ತಂಡಗಳೂ ಸ್ಥಳಕ್ಕೆ ಭೇಟಿ ನೀಡಿ ಆಸ್ಪತ್ರೆ ಪ್ರಮುಖರಿಂದ ಮಾಹಿತಿ ಕಲೆಹಾಕಿವೆ. ಗೋಡೆ ಪಕ್ಕದಲ್ಲಿಯೇ ಹಿಂದೆ ಇದ್ದ ‘ಡಿ’ ದರ್ಜೆ ನೌಕರರ ಕಟ್ಟಡ ತೆರವುಗೊಳಿಸಿ ಸುರಿದಿದ್ದ ಅವಶೇಷಗಳ ಮಾಹಿತಿ ಸಹಿತ ಎಲ್ಲಾ ವಿವರ ಒದಗಿಸಿದ್ದೇವೆ’ ಎಂದು ಬೌರಿಂಗ್ ಆಸ್ಪತ್ರೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದ ಸಮಿತಿ ಸರ್ಕಾರಕ್ಕೆ ಮೇ 8ರಂದು ವರದಿ ಸಲ್ಲಿಸುವ ಸಾಧ್ಯತೆಯಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿದು, ಏಳು ಜನರ ಜೀವ ಕಸಿದುಕೊಂಡು ಎಂಟು ದಿನವಾಗಿದ್ದರೂ ಸ್ಥಳದಲ್ಲಿ ಇನ್ನೂ ಆತಂಕ ಮನೆಮಾಡಿದೆ. ಇಲ್ಲಿನ ಬೀದಿ ಬದಿಯ ವ್ಯಾಪಾರವನ್ನೇ ನಂಬಿಕೊಂಡಿದ್ದವರ ಬದುಕು ಅತಂತ್ರವಾಗಿದೆ.</p>.<p>ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಗೋಡೆಯ ಸಮೀಪ 15–20 ವರ್ಷದಿಂದ ವ್ಯಾಪಾರ ನಡೆಸುತ್ತಿದ್ದವರನ್ನು ಅಲ್ಲಿಂದ ತೆರವುಗೊಳಿಸಿದ ಮೇಲೆ ಸೂಕ್ತ ಜಾಗವಿಲ್ಲದೇ ಸಿಕ್ಕ ಸ್ಥಳದಲ್ಲೇ ವಹಿವಾಟು ನಡೆಸುತ್ತಿದ್ದಾರೆ. ನಿತ್ಯದ ಆದಾಯಕ್ಕೆ ಹೊಡೆತ ಬಿದ್ದಿರುವ ಜೊತೆಗೆ ಮುಂದೆ ಏನಾಗಲಿದೆಯೋ ಎನ್ನುವ ದುಗುಡವೂ ಅವರ ಮನಸಿನಲ್ಲಿದೆ.</p>.<p>ಸದಾ ಜನಜಂಗುಳಿ ಇರುವ ಬೌರಿಂಗ್ ಆಸ್ಪತ್ರೆ ಸುತ್ತಮುತ್ತಲಿನ ಜಾಗದಲ್ಲಿ ಸಾವಿರಾರು ಮಂದಿ ಸಂಚರಿಸುತ್ತಾರೆ. ಕೆಲವರು ಆಸ್ಪತ್ರೆಗೆ, ಇನ್ನಷ್ಟು ಮಂದಿ ಚರ್ಚ್, ದೇವಸ್ಥಾನಗಳಿಗೂ ಬರುವವರೂ ಇದ್ದಾರೆ. ವಹಿವಾಟಿನ ಕಾರಣಕ್ಕೂ ಈ ಭಾಗ ಜನಸಂದಣಿ ಪ್ರದೇಶವಾಗಿ ಮಾರ್ಪಟ್ಟಿದೆ. ಅಕ್ಕಪಕ್ಕದಲ್ಲಿ ವಾಸಿಸುವರಿಗೆ ನಿತ್ಯ ಸಂಚಾರಕ್ಕೆ ಇದೇ ಮುಖ್ಯ ಮಾರ್ಗವಾಗಿದೆ. </p>.<p>ದುರ್ಘಟನೆ ಬಳಿಕ ಆ ರಸ್ತೆಯ ಎರಡೂ ಬದಿಗಳಲ್ಲಿ ವ್ಯಾಪಾರಿಗಳನ್ನು ಸಂಪೂರ್ಣ ತೆರವು ಮಾಡಲಾಗಿದೆ. ಕಾಂಪೌಂಡ್ ಕುಸಿದ ಸ್ಥಳದಲ್ಲಿ ಮರಳಿನ ಮೂಟೆಗಳನ್ನು ಜೋಡಿಸಿ, ಇನ್ನಷ್ಟು ಮಣ್ಣು ಕುಸಿಯದಂತೆ ಎಚ್ಚರಿಕೆ ವಹಿಸಲಾಗಿದೆ. ಉಳಿದಿರುವ ಗೋಡೆಯ ಉದ್ದಕ್ಕೂ ಹಳದಿ ಪಟ್ಟಿಯನ್ನು ಅಳವಡಿಸಿ, ಜನರು ಅಲ್ಲಿ ಸಂಚರಿಸದಂತೆ ನಿರ್ಬಂಧಿಸಲಾಗಿದೆ.</p>.<p>ಸ್ಥಳೀಯರಲ್ಲದೆ ಹೊರ ರಾಜ್ಯದ ವ್ಯಾಪಾರಿಗಳು, ನಾನಾ ಭಾಗಗಳ ಪಾದಚಾರಿಗಳು ದುರಂತ ನಡೆದ ಅವಶೇಷದ ಮುಂದೆಯೇ ನಿತ್ಯ ನಡೆದುಕೊಂಡು ಹೋಗುತ್ತಾರೆ. ಕುಸಿದಿರುವ ಗೋಡೆ ಅವರಲ್ಲಿ ಭೀತಿ ಮೂಡಿಸುತ್ತಿದೆ.</p>.<p>‘ಏಳೆಂಟು ವರ್ಷಗಳಿಂದ ಗೋಡೆ ಬದಿಯಲ್ಲಿಯೇ ವ್ಯಾಪಾರ ಮಾಡಿಕೊಂಡಿದ್ದೆ. ದುರಂತ ಸ್ಥಳದಿಂದ ನನ್ನ ಮಳಿಗೆ ದೂರವಿತ್ತು. ಆದರೂ ಅನಾಹುತ ಆಗಬಹುದು ಎಂದು ತೆರವುಗೊಳಿಸಿದ್ದಾರೆ. ಇದರಿಂದ ಚರ್ಚ್ ಸಮೀಪದ ರಸ್ತೆಯಲ್ಲಿ ಕುಳಿತು ವ್ಯಾಪಾರ ಮಾಡುತ್ತಿದ್ದೇನೆ. ಹಿಂದೆ ದಿನಕ್ಕೆ ₹1 ಸಾವಿರವರೆಗೂ ವ್ಯಾಪಾರವಾಗುತ್ತಿತ್ತು. ಈಗ ₹400ರಿಂದ ₹500ಕ್ಕೆ ಇಳಿಕೆಯಾಗಿದೆ. ಬೇಗನೆ ಗೋಡೆ ನಿರ್ಮಿಸಿ ನಮಗೆ ಅಲ್ಲಿ ಸುರಕ್ಷಿತ ಜಾಗ ಒದಗಿಸಿದರೆ ಒಳ್ಳೆಯದಾಗಲಿದೆ’ ಎಂದು ತಮಿಳುನಾಡು ಮೂಲದ ವ್ಯಾಪಾರಿ ಸರೋಜ ಹೇಳಿದರು.</p>.<p><strong>ಮರದ ಕೊಂಬೆ ತೆರವಿಲ್ಲ:</strong> ಘಟನೆ ನಡೆದ ಸ್ಥಳದಿಂದ ಅನತಿ ದೂರದಲ್ಲಿಯೇ ಆಸ್ಪತ್ರೆಯ ಶವಾಗಾರವೂ ಇದೆ. ಅಲ್ಲಿಂದ ಮುಂದೆಕ್ಕೆ 300 ಮೀಟರ್ವರೆಗೂ ಇರುವ ಗೋಡೆಯೂ ಶಿಥಿಲಗೊಂಡಿದೆ. ಪಕ್ಕದಲ್ಲಿ ವೈದ್ಯರು, ಸಿಬ್ಬಂದಿ ವಸತಿಗೃಹವಿದೆ. ಅಲ್ಲಿನ ಆವರಣದ ಗೋಡೆಯೂ ಹಳೆಯದಾಗಿದೆ. ಆ ಭಾಗದಲ್ಲಿ ಮರದ ಕೊಂಬೆಗಳು ಗಾಳಿಗೆ ಮುರಿದುಬಿದ್ದಿದ್ದು, ಅವುಗಳನ್ನು ತೆರವುಗೊಳಿಸಿಲ್ಲ. ಜನ ಸಂಚರಿಸದಂತೆ ಪೊಲೀಸರು ಕ್ರಮ ಕೈಗೊಂಡಿದ್ದರೂ ಕೆಲವರು ಅಲ್ಲಿಯೇ ವಾಹನ ನಿಲ್ಲಿಸುತ್ತಿದ್ದಾರೆ. </p>.<p>‘ಎಂಟು ದಿನಗಳ ಹಿಂದೆ ಭಾರಿ ಮಳೆ ಬಂದು ಇಲ್ಲಿ ಮರದ ಕೊಂಬೆಗಳೆಲ್ಲಾ ಬಿದ್ದಿವೆ. ಗೋಡೆ ಕುಸಿದು ದುರಂತ ಸಂಭವಿಸಿದೆ. ಒಂದು ಭಾಗದಲ್ಲಿ ಬಿದ್ದ ಮರದ ಕೊಂಬೆಗಳನ್ನು ರಸ್ತೆಯಲ್ಲೇ ಬಿಟ್ಟಿದ್ದಾರೆ. ಇದನ್ನು ತೆರವು ಮಾಡಲಿ’ ಎಂದು ಚರ್ಚ್ ಮುಂಭಾಗದಲ್ಲಿಯೇ 15 ವರ್ಷದಿಂದ ಹಣ್ಣಿನ ರಸ ಮಾರಾಟ ಮಾಡುವ ಖಲೀಲ್ ಹೇಳಿದರು.</p>.<p><strong>ಪೊಲೀಸ್ ಸಂಚಾರ:</strong> ಘಟನೆ ನಂತರ ಪೊಲೀಸ್ ಗಸ್ತನ್ನು ಇಲ್ಲಿ ಹೆಚ್ಚಿಸಲಾಗಿದೆ. ವ್ಯಾಪಾರಸ್ಥರು ಪಾದಚಾರಿ ಮಾರ್ಗಕ್ಕೆ ಮರಳದಂತೆ ಸಂಚಾರ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೂಚನೆ ನೀಡುತ್ತಿದ್ದಾರೆ. ಆಸ್ಪತ್ರೆಯ ಭದ್ರತಾ ಸಿಬ್ಬಂದಿಯೂ ಜನ ಗೋಡೆಯ ಬದಿಯಲ್ಲಿ ನಿಲ್ಲದಂತೆ ಮನವಿ ಮಾಡುತ್ತಿದ್ದಾರೆ. ಆದರೆ, ಆಸ್ಪತ್ರೆಯ ಮುಂಭಾಗ, ಮತ್ತೊಂದು ಬದಿಯ ಗೋಡೆಯ ಪಕ್ಕದಲ್ಲಿ ಪಾದಚಾರಿಗಳ ಸಂಚಾರ, ವಹಿವಾಟು ಯಥಾರೀತಿಯಿದೆ.</p>.<p>‘ದುರಂತ ನಡೆದ ಒಂದು ರಸ್ತೆಯಲ್ಲಿ ವ್ಯಾಪಾರಿಗಳನ್ನು ಸ್ಥಳಾಂತರಿಸಲಾಗಿದೆ. ಚರ್ಚ್ ಪಕ್ಕದಲ್ಲೂ ವ್ಯಾಪಾರಕ್ಕೆ ಅವಕಾಶ ನೀಡಿಲ್ಲ. ಕೆಲವರು ಬಂದು ವ್ಯಾಪಾರ ಮಾಡಲು ಯತ್ನಿಸಿದರೂ ದೂರ ಹೋಗುವಂತೆ ಅವರಿಗೆ ಸೂಚನೆ ನೀಡುತ್ತಿದ್ದೇವೆ. ಪಾದಚಾರಿಗಳೂ ಎಚ್ಚರ ವಹಿಸಿ ಗೋಡೆ ಪಕ್ಕ ಹೋಗದಂತೆ ತಿಳಿಸಿ ಸಂಚಾರ ದಟ್ಟಣೆಯಾಗದಂತೆ ತಡೆಯುತ್ತಿದ್ದೇವೆ’ ಎಂದು ಸಂಚಾರ ಪೊಲೀಸರೊಬ್ಬರು ಹೇಳಿದರು.</p>.<div><blockquote>ಗೋಡೆ ಕುಸಿದ ಮರುದಿನವೇ ಇಲ್ಲಿಂದ ಹೋಗುವಂತೆ ಹೇಳಿದರು. ಹತ್ತಿರದಲ್ಲೇ ವ್ಯಾಪಾರ ಮಾಡಿಕೊಂಡಿದ್ದೇನೆ. ಆದಾಯ ಕಡಿಮೆಯಾಗಿದೆ ನಮ್ಮ ಕಷ್ಟವನ್ನು ಯಾರಿಗೆ ಹೇಳುವುದು? </blockquote><span class="attribution">ಶಂಕರ್ ಬಟ್ಟೆ ವ್ಯಾಪಾರಿ</span></div>.<div><blockquote>ಘಟನೆ ನಡೆದ ಇನ್ನೊಂದು ಬದಿಯಲ್ಲಿ ವಿದ್ಯಾರ್ಥಿಗಳು ಆಟವಾಡಲು ವ್ಯವಸ್ಥೆ ಮಾಡಲಾಗಿತ್ತು. ಈಗ ಯಾರನ್ನೂ ಇಲ್ಲಿ ಆಟವಾಡಲು ಬಿಡದಂತೆ ಸೂಚಿಸಿದ್ದಾರೆ. </blockquote><span class="attribution">ಆಸ್ಪತ್ರೆ ಭದ್ರತಾ ಸಿಬ್ಬಂದಿ</span></div>.<h2> ಮಣ್ಣು ಸುರಿದವರು ಯಾರು? </h2>.<p>ಮಣ್ಣು ಸುರಿದಿದ್ದರಿಂದಲೇ ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿದಿರುವುದು ಸ್ಪಷ್ಟವಾಗಿದ್ದರೂ ಅದನ್ನು ಯಾರು ಅಲ್ಲಿ ಸುರಿದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಗೋಡೆ ದುರಂತದ ಕುರಿತು ತನಿಖೆಗೆ ಮೂರು ಪ್ರತ್ಯೇಕ ಸಮಿತಿ ರಚಿಸಲಾಗಿದ್ದು ಎಲ್ಲ ಸಮಿತಿಗಳೂ ಸ್ಥಳಕ್ಕೆ ಭೇಟಿ ನೀಡಿ ಈಗಾಗಲೇ ಮಾಹಿತಿಯನ್ನು ಸಂಗ್ರಹಿಸಿವೆ. ‘ಮಣ್ಣು ಸಂಗ್ರಹದಿಂದಲೇ ಗೋಡೆ ಕುಸಿತ ಕಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹಿಂದಿದ್ದ ಕಟ್ಟಡವನ್ನು ತೆರವುಗೊಳಿಸಿದ ಮಣ್ಣೋ ಅಥವಾ ಹೊಸ ಕಾಮಗಾರಿ ವೇಳೆಯಲ್ಲಿ ಹಾಕಿರುವ ಮಣ್ಣೋ ಎಂಬುದು ಸಮಿತಿಗಳಿಗೆ ಸ್ಪಷ್ಟವಾಗಿಲ್ಲ’ ಎಂದು ಮೂಲಗಳು ತಿಳಿಸಿವೆ. ‘</p><p>ದುರಂತ ನಡೆದ ಭಾಗದ ಗೋಡೆ ಗುಣಮಟ್ಟದಿಂದ ಕೂಡಿಲ್ಲ. ಇದನ್ನು ಸಂಪೂರ್ಣವಾಗಿ ಬದಲಿಸಿ ಸುಸಜ್ಜಿತ ಗೋಡೆಯನ್ನು ತುರ್ತಾಗಿ ನಿರ್ಮಿಸುವಂತೆ ಸಮಿತಿಗಳು ಶಿಫಾರಸು ಮಾಡಬಹುದು’ ಎನ್ನಲಾಗಿದೆ. ‘ನಗರ ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಮಿತಿ ಲೋಕಾಯುಕ್ತ ಅಧಿಕಾರಿ ನೇತೃತ್ವದ ತನಿಖಾ ತಂಡ ಅಧೀಕ್ಷಕ ಎಂಜಿನಿಯರ್ ನೇತೃತ್ವದ ತಾಂತ್ರಿಕ ತಂಡಗಳೂ ಸ್ಥಳಕ್ಕೆ ಭೇಟಿ ನೀಡಿ ಆಸ್ಪತ್ರೆ ಪ್ರಮುಖರಿಂದ ಮಾಹಿತಿ ಕಲೆಹಾಕಿವೆ. ಗೋಡೆ ಪಕ್ಕದಲ್ಲಿಯೇ ಹಿಂದೆ ಇದ್ದ ‘ಡಿ’ ದರ್ಜೆ ನೌಕರರ ಕಟ್ಟಡ ತೆರವುಗೊಳಿಸಿ ಸುರಿದಿದ್ದ ಅವಶೇಷಗಳ ಮಾಹಿತಿ ಸಹಿತ ಎಲ್ಲಾ ವಿವರ ಒದಗಿಸಿದ್ದೇವೆ’ ಎಂದು ಬೌರಿಂಗ್ ಆಸ್ಪತ್ರೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದ ಸಮಿತಿ ಸರ್ಕಾರಕ್ಕೆ ಮೇ 8ರಂದು ವರದಿ ಸಲ್ಲಿಸುವ ಸಾಧ್ಯತೆಯಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>