‘ವೈದ್ಯರು, ಶುಶ್ರೂಷಕರು, ಪೊಲೀಸರು ಸೇರಿದಂತೆ ಕೋವಿಡ್–19 ಕರ್ತವ್ಯ ನಿರ್ವಹಿಸಿದ ಎಲ್ಲರೂ ಒಂದು ವಿಚಿತ್ರ ಪರಿಸ್ಥಿತಿಗೆ ಸಿಲುಕಿದ್ದಾರೆ. ಬೇರೆಯವರನ್ನು ಕೊರೊನಾ ಸೋಂಕು ಮುಕ್ತರನ್ನಾಗಿಸಲು ಅಥವಾ ಅವರ ಆರೋಗ್ಯ ತಪಾಸಣೆ ಮಾಡಲು ಹೋದಾಗ ಸೋಂಕು ತಗುಲಿಸಿಕೊಂಡಿದ್ದಾರೆ. ಹೀಗೆ, ಸೋಂಕಿಗೆ ಒಳಗಾದವರನ್ನು ಅದೇ ಜನ ದೂರ ಇಡುವ ಅಥವಾ ಅವರನ್ನು ತಿರಸ್ಕರಿಸುವ ಬೆಳವಣಿಗೆಗಳು ನಡೆಯುತ್ತಿವೆ. ಇದು ತಪ್ಪಬೇಕು’ ಎಂದು ಕೃಷ್ಣಯ್ಯ ಸಲಹೆ ನೀಡುತ್ತಾರೆ.