ನಗರದ ಮರಿಯಪ್ಪನಪಾಳ್ಯದ ನಿವಾಸಿಯೊಬ್ಬರು ಪುರದಪಾಳ್ಯ ಗ್ರಾಮದಲ್ಲಿ ಹೊಂದಿರುವ ಜಮೀನಿನ ಖಾತೆಯನ್ನು ಪೌತಿ ಖಾತೆ ಆಧಾರದಲ್ಲಿ ಬದಲಾವಣೆ ಮಾಡಿಕೊಡುವಂತೆ ತಾವರೆಕೆರೆ ನಾಡ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ₹ 60,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸತೀಶ್ ಕುಮಾರ್, ಮೊದಲೇ ₹ 55,000 ಪಡೆದಿದ್ದರು. ಕೊನೆಯ ₹ 5,000ಕ್ಕಾಗಿ ಒತ್ತಾಯಿಸುತ್ತಿದ್ದರು. ಈ ಕುರಿತು ಅರ್ಜಿದಾರರು ಎಸಿಬಿ ಕಚೇರಿಗೆ ದೂರು ನೀಡಿದ್ದರು.