<p><strong>ಬೆಂಗಳೂರು</strong>: ಬೆಂಗಳೂರು ಜಲಮಂಡಳಿ ಮೊದಲ ಸಲ ಜಾರಿಗೆ ತಂದಿರುವ ಒಂದು ಬಾರಿ ಪರಿಹಾರ (ಒಟಿಎಸ್) ಯೋಜನೆಗೆ ಗ್ರಾಹಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.</p>.<p>ದೀರ್ಘಕಾಲದಿಂದ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರನ್ನು ಗುರುತಿಸಿ ನೋಟಿಸ್ ನೀಡಲಾಗಿತ್ತು. ಏಪ್ರಿಲ್ ತಿಂಗಳ ಎರಡು ವಾರದಲ್ಲಿ 56,765 ಗ್ರಾಹಕರಿಂದ ₹12.15 ಕೋಟಿ ಸಂಗ್ರಹವಾಗಿದೆ. ಮೇ ಹಾಗೂ ಜೂನ್ ತಿಂಗಳಲ್ಲಿ ಹೆಚ್ಚಿನ ಬಾಕಿ ವಸೂಲಿಯಾಗುವ ನಿರೀಕ್ಷೆ ಇದೆ.</p>.<p>ಹಳೆಯ ದತ್ತಾಂಶಗಳನ್ನು ಪರಿಶೀಲಿಸಿದ ಮಂಡಳಿಯು, 3,73,883 ದಾಖಲೆಗಳ ಪೈಕಿ ಒಟಿಎಸ್ಗೆ ಅರ್ಹವಾದ 2,81,019 ದಾಖಲೆಗಳನ್ನು ಪ್ರತ್ಯೇಕಿಸಿದೆ. ಈಗಾಗಲೇ 2,12,359 ನೋಟಿಸ್ಗಳನ್ನು ಮುದ್ರಿಸಿ ಆಯಾ ಉಪ-ವಿಭಾಗಗಳಿಗೆ ವಿತರಣೆಗಾಗಿ ಕಳುಹಿಸಲಾಗಿದೆ.</p>.<p>ನೋಟಿಸ್ ವಿತರಣೆ ವಿಳಂಬವಾಗದಂತೆ ನೋಡಿಕೊಳ್ಳಲು, ಮಂಡಳಿಯು ಮುದ್ರಣ ಕಾರ್ಯವನ್ನು ಹೊರಗುತ್ತಿಗೆ ನೀಡಿದೆ. ನಿಯೋಜಿತ ಸಂಸ್ಥೆಯು ಪ್ರತಿ 48 ಗಂಟೆಗಳಿಗೆ 50,000ದಷ್ಟು ನೋಟಿಸ್ ಮುದ್ರಿಸುವ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ.</p>.<p>ಬಾಕಿ ಉಳಿದಿರುವ 1,17,098 ನೋಟಿಸ್ಗಳನ್ನು ಮೇ 10ರ ಒಳಗೆ ಮುದ್ರಿಸಿ, ಫಲಾನುಭವಿಗಳಿಗೆ ತಲುಪಿಸುವ ಗುರಿಯನ್ನು ಮಂಡಳಿ ಹೊಂದಿದೆ.</p>.<p>ಈ ಯೋಜನೆ ಮೂಲಕ ₹471.56 ಕೋಟಿ ಅಸಲನ್ನು ಸಂಗ್ರಹಿಸುವ ಗುರಿ ಜಲಮಂಡಳಿಯದ್ದಾಗಿದೆ. ₹252.29 ಕೋಟಿ ಬಡ್ಡಿ ಮನ್ನಾ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸುತ್ತಿದೆ ಎಂದು ಅಧ್ಯಕ್ಷ ಡಾ.ರಾಮಪ್ರಸಾತ್ ಮನೋಹರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಬೆಂಗಳೂರು ಜಲಮಂಡಳಿ ಮೊದಲ ಸಲ ಜಾರಿಗೆ ತಂದಿರುವ ಒಂದು ಬಾರಿ ಪರಿಹಾರ (ಒಟಿಎಸ್) ಯೋಜನೆಗೆ ಗ್ರಾಹಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.</p>.<p>ದೀರ್ಘಕಾಲದಿಂದ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರನ್ನು ಗುರುತಿಸಿ ನೋಟಿಸ್ ನೀಡಲಾಗಿತ್ತು. ಏಪ್ರಿಲ್ ತಿಂಗಳ ಎರಡು ವಾರದಲ್ಲಿ 56,765 ಗ್ರಾಹಕರಿಂದ ₹12.15 ಕೋಟಿ ಸಂಗ್ರಹವಾಗಿದೆ. ಮೇ ಹಾಗೂ ಜೂನ್ ತಿಂಗಳಲ್ಲಿ ಹೆಚ್ಚಿನ ಬಾಕಿ ವಸೂಲಿಯಾಗುವ ನಿರೀಕ್ಷೆ ಇದೆ.</p>.<p>ಹಳೆಯ ದತ್ತಾಂಶಗಳನ್ನು ಪರಿಶೀಲಿಸಿದ ಮಂಡಳಿಯು, 3,73,883 ದಾಖಲೆಗಳ ಪೈಕಿ ಒಟಿಎಸ್ಗೆ ಅರ್ಹವಾದ 2,81,019 ದಾಖಲೆಗಳನ್ನು ಪ್ರತ್ಯೇಕಿಸಿದೆ. ಈಗಾಗಲೇ 2,12,359 ನೋಟಿಸ್ಗಳನ್ನು ಮುದ್ರಿಸಿ ಆಯಾ ಉಪ-ವಿಭಾಗಗಳಿಗೆ ವಿತರಣೆಗಾಗಿ ಕಳುಹಿಸಲಾಗಿದೆ.</p>.<p>ನೋಟಿಸ್ ವಿತರಣೆ ವಿಳಂಬವಾಗದಂತೆ ನೋಡಿಕೊಳ್ಳಲು, ಮಂಡಳಿಯು ಮುದ್ರಣ ಕಾರ್ಯವನ್ನು ಹೊರಗುತ್ತಿಗೆ ನೀಡಿದೆ. ನಿಯೋಜಿತ ಸಂಸ್ಥೆಯು ಪ್ರತಿ 48 ಗಂಟೆಗಳಿಗೆ 50,000ದಷ್ಟು ನೋಟಿಸ್ ಮುದ್ರಿಸುವ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ.</p>.<p>ಬಾಕಿ ಉಳಿದಿರುವ 1,17,098 ನೋಟಿಸ್ಗಳನ್ನು ಮೇ 10ರ ಒಳಗೆ ಮುದ್ರಿಸಿ, ಫಲಾನುಭವಿಗಳಿಗೆ ತಲುಪಿಸುವ ಗುರಿಯನ್ನು ಮಂಡಳಿ ಹೊಂದಿದೆ.</p>.<p>ಈ ಯೋಜನೆ ಮೂಲಕ ₹471.56 ಕೋಟಿ ಅಸಲನ್ನು ಸಂಗ್ರಹಿಸುವ ಗುರಿ ಜಲಮಂಡಳಿಯದ್ದಾಗಿದೆ. ₹252.29 ಕೋಟಿ ಬಡ್ಡಿ ಮನ್ನಾ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸುತ್ತಿದೆ ಎಂದು ಅಧ್ಯಕ್ಷ ಡಾ.ರಾಮಪ್ರಸಾತ್ ಮನೋಹರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>