<p><strong>ಬೆಂಗಳೂರು:</strong> ಸೋಂಪುರ ಕೆರೆಯ ಉಳಿವು, ಅಂತರ್ಜಲ ಸಂರಕ್ಷಣೆ, ನೀರು ಶುದ್ದೀಕರಣದ ಭಾಗವಾಗಿ ಬೆಂಗಳೂರು ಜಲಮಂಡಳಿಯು ನಿರ್ಮಿಸುತ್ತಿರುವ 8 ಎಂಎಲ್ಡಿ ಸಾಮರ್ಥ್ಯದ ಒಳಚರಂಡಿ ನೀರು ಪಂಪಿಂಗ್ ಸ್ಟೇಷನ್ ಕಾಮಗಾರಿಗೆ ಚಾಲನೆ ಸಿಕ್ಕಿದೆ.</p>.<p>ಕರ್ನಾಟಕ ಲೋಕಾಯುಕ್ತ ಬಿ.ಎಸ್.ಪಾಟೀಲ್ ಅವರು 'ಮಧ್ಯಂತರ ಒಳಚರಂಡಿ ನೀರು ಪಂಪಿಂಗ್ ಸ್ಟೇಷನ್'( ಐಎಸ್ಪಿಎಸ್) ಕಾಮಗಾರಿಯನ್ನು ಸೋಮವಾರ ಉದ್ಘಾಟಿಸಿ, ‘ಜಲಮಂಡಳಿ ಕೈಗೊಂಡಿರುವ ಈ ಕ್ರಮ ಕೆರೆ ಸಂರಕ್ಷಣೆಯ ಐತಿಹಾಸಿಕ ಹೆಜ್ಜೆ’ ಎಂದು ಮೆಚ್ಚುಗೆ ಸೂಚಿಸಿದರು.</p>.<p>‘ಯೋಜನೆಯಿಂದ ಕಲುಷಿತ ನೀರನ್ನು ತಡೆದು ಸಂಸ್ಕರಣಾ ಘಟಕಕ್ಕೆ ಪಂಪ್ ಮಾಡುವ ಮೂಲಕ ತ್ಯಾಜ್ಯ ನೀರು ಸೋಂಪುರ ಕೆರೆಗೆ ಸೇರುವುದನ್ನು ಸಂಪೂರ್ಣ ತಪ್ಪಿಸಲಾಗುತ್ತದೆ. ಇದರಿಂದ ಕೆರೆ ಪರಿಸರ ವ್ಯವಸ್ಥೆ ಉಳಿಯಲಿದೆ. ಶುದ್ಧ ಕೆರೆಗಳಿಂದ ಅಂತರ್ಜಲ ಮಟ್ಟ ಸುಧಾರಿಸಿ ಸುತ್ತಮುತ್ತಲ ಸಮುದಾಯಗಳಿಗೆ ಸುಸ್ಥಿರ ನೀರಿನ ಮೂಲವನ್ನು ಒದಗಿಸುತ್ತದೆ. ಅತ್ಯಾಧುನಿಕ ಒಳಚರಂಡಿ ನಿರ್ವಹಣೆಯಿಂದಾಗಿ ಲಿಂಗಧೀರನಹಳ್ಳಿ ಮತ್ತು ಸೋಂಪುರ ಪ್ರದೇಶಗಳಲ್ಲಿ ಜಲಜನ್ಯ ರೋಗಗಳ ಹರಡುವಿಕೆ ಕಡಿಮೆಯಾಗಲಿದೆ ’ ಎಂದು ಹೇಳಿದರು.</p>.<p>‘ಕೆರೆಯ ಉಳಿವಿಗೆ ಪೂರಕವಾಗಿ ಈ ಯೋಜನೆಗೆ ಕಂದಾಯ ಇಲಾಖೆ ಅಗತ್ಯ ಭೂಮಿ ಹಸ್ತಾಂತರಿಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 'ಠೇವಣಿ ಕೊಡುಗೆ ನಿಧಿ' ಒದಗಿಸಿದೆ. ಸಾರ್ವಜನಿಕರ ಹಿತದೃಷ್ಟಿ, ಪರಿಸರ ಸಂರಕ್ಷಣೆ ಯೋಜನೆಯನ್ನು ವಿವಿಧ ಇಲಾಖೆಗಳ ಸಮನ್ವಯದಿಂದ ತ್ವರಿತವಾಗಿ ಕೈಗೆತ್ತಿಕೊಳ್ಳಲಾಗಿದೆ. ಸರ್ಕಾರಿ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಿದರೆ ಒಳ್ಳೆಯದನ್ನು ಸಾಧಿಸಬಹುದು ಎಂಬುದಕ್ಕೆ ಈ ಯೋಜನೆ ಅತ್ಯುತ್ತಮ ಉದಾಹರಣೆಯಾಗಿದೆ’ ಎಂದರು.</p>.<p>ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ‘ಪರಿಸರ ಸಂರಕ್ಷಣೆ ಮತ್ತು ಆಡಳಿತಾತ್ಮಕ ಹೊಣೆಗಾರಿಕೆ ನಿಟ್ಟಿನಲ್ಲಿ ಲೋಕಾಯುಕ್ತರ ನಿರ್ದೇಶನದಂತೆ ಈ ಕಾಮಗಾರಿಗೆ ಚಾಲನೆ ದೊರೆತಿದೆ. ಲೋಕಾಯುಕ್ತರ ಮುತುವರ್ಜಿಯಿಂದ ಯೋಜನೆಗೆ ವೇಗ ಸಿಗಲಿದೆ’ ಎಂದರು.</p>.<p>ಮುಖ್ಯ ಇಂಜಿನಿಯರ್ ರಾಜೀವ್, ಉಪ ಮುಖ್ಯ ಇಂಜಿನಿಯರ್ ಸುಧೀರ್, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಸೋಂಪುರ ಕೆರೆಯ ಉಳಿವು, ಅಂತರ್ಜಲ ಸಂರಕ್ಷಣೆ, ನೀರು ಶುದ್ದೀಕರಣದ ಭಾಗವಾಗಿ ಬೆಂಗಳೂರು ಜಲಮಂಡಳಿಯು ನಿರ್ಮಿಸುತ್ತಿರುವ 8 ಎಂಎಲ್ಡಿ ಸಾಮರ್ಥ್ಯದ ಒಳಚರಂಡಿ ನೀರು ಪಂಪಿಂಗ್ ಸ್ಟೇಷನ್ ಕಾಮಗಾರಿಗೆ ಚಾಲನೆ ಸಿಕ್ಕಿದೆ.</p>.<p>ಕರ್ನಾಟಕ ಲೋಕಾಯುಕ್ತ ಬಿ.ಎಸ್.ಪಾಟೀಲ್ ಅವರು 'ಮಧ್ಯಂತರ ಒಳಚರಂಡಿ ನೀರು ಪಂಪಿಂಗ್ ಸ್ಟೇಷನ್'( ಐಎಸ್ಪಿಎಸ್) ಕಾಮಗಾರಿಯನ್ನು ಸೋಮವಾರ ಉದ್ಘಾಟಿಸಿ, ‘ಜಲಮಂಡಳಿ ಕೈಗೊಂಡಿರುವ ಈ ಕ್ರಮ ಕೆರೆ ಸಂರಕ್ಷಣೆಯ ಐತಿಹಾಸಿಕ ಹೆಜ್ಜೆ’ ಎಂದು ಮೆಚ್ಚುಗೆ ಸೂಚಿಸಿದರು.</p>.<p>‘ಯೋಜನೆಯಿಂದ ಕಲುಷಿತ ನೀರನ್ನು ತಡೆದು ಸಂಸ್ಕರಣಾ ಘಟಕಕ್ಕೆ ಪಂಪ್ ಮಾಡುವ ಮೂಲಕ ತ್ಯಾಜ್ಯ ನೀರು ಸೋಂಪುರ ಕೆರೆಗೆ ಸೇರುವುದನ್ನು ಸಂಪೂರ್ಣ ತಪ್ಪಿಸಲಾಗುತ್ತದೆ. ಇದರಿಂದ ಕೆರೆ ಪರಿಸರ ವ್ಯವಸ್ಥೆ ಉಳಿಯಲಿದೆ. ಶುದ್ಧ ಕೆರೆಗಳಿಂದ ಅಂತರ್ಜಲ ಮಟ್ಟ ಸುಧಾರಿಸಿ ಸುತ್ತಮುತ್ತಲ ಸಮುದಾಯಗಳಿಗೆ ಸುಸ್ಥಿರ ನೀರಿನ ಮೂಲವನ್ನು ಒದಗಿಸುತ್ತದೆ. ಅತ್ಯಾಧುನಿಕ ಒಳಚರಂಡಿ ನಿರ್ವಹಣೆಯಿಂದಾಗಿ ಲಿಂಗಧೀರನಹಳ್ಳಿ ಮತ್ತು ಸೋಂಪುರ ಪ್ರದೇಶಗಳಲ್ಲಿ ಜಲಜನ್ಯ ರೋಗಗಳ ಹರಡುವಿಕೆ ಕಡಿಮೆಯಾಗಲಿದೆ ’ ಎಂದು ಹೇಳಿದರು.</p>.<p>‘ಕೆರೆಯ ಉಳಿವಿಗೆ ಪೂರಕವಾಗಿ ಈ ಯೋಜನೆಗೆ ಕಂದಾಯ ಇಲಾಖೆ ಅಗತ್ಯ ಭೂಮಿ ಹಸ್ತಾಂತರಿಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 'ಠೇವಣಿ ಕೊಡುಗೆ ನಿಧಿ' ಒದಗಿಸಿದೆ. ಸಾರ್ವಜನಿಕರ ಹಿತದೃಷ್ಟಿ, ಪರಿಸರ ಸಂರಕ್ಷಣೆ ಯೋಜನೆಯನ್ನು ವಿವಿಧ ಇಲಾಖೆಗಳ ಸಮನ್ವಯದಿಂದ ತ್ವರಿತವಾಗಿ ಕೈಗೆತ್ತಿಕೊಳ್ಳಲಾಗಿದೆ. ಸರ್ಕಾರಿ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಿದರೆ ಒಳ್ಳೆಯದನ್ನು ಸಾಧಿಸಬಹುದು ಎಂಬುದಕ್ಕೆ ಈ ಯೋಜನೆ ಅತ್ಯುತ್ತಮ ಉದಾಹರಣೆಯಾಗಿದೆ’ ಎಂದರು.</p>.<p>ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ‘ಪರಿಸರ ಸಂರಕ್ಷಣೆ ಮತ್ತು ಆಡಳಿತಾತ್ಮಕ ಹೊಣೆಗಾರಿಕೆ ನಿಟ್ಟಿನಲ್ಲಿ ಲೋಕಾಯುಕ್ತರ ನಿರ್ದೇಶನದಂತೆ ಈ ಕಾಮಗಾರಿಗೆ ಚಾಲನೆ ದೊರೆತಿದೆ. ಲೋಕಾಯುಕ್ತರ ಮುತುವರ್ಜಿಯಿಂದ ಯೋಜನೆಗೆ ವೇಗ ಸಿಗಲಿದೆ’ ಎಂದರು.</p>.<p>ಮುಖ್ಯ ಇಂಜಿನಿಯರ್ ರಾಜೀವ್, ಉಪ ಮುಖ್ಯ ಇಂಜಿನಿಯರ್ ಸುಧೀರ್, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>