‘ಇಂದಿರಾನಗರದ ಹಳೆ ಮದ್ರಾಸು ರಸ್ತೆ ಕಡೆಯಿಂದ, ಹೊರವರ್ತುಲ ರಸ್ತೆಯಿಂದ, ಬೈಯಪ್ಪನಹಳ್ಳಿ ರೈಲ್ವೆ ಮೇಲ್ಸೇತುವೆ ಮೂಲಕ, ಬಾಣಸವಾಡಿ ಕಡೆಯಿಂದ ಹಾಗೂ ಕಮ್ಮನಹಳ್ಳಿ ಕಡೆಯಿಂದ ಬೈಯಪ್ಪನಹಳ್ಳಿ ಟರ್ಮಿನಲ್ಗೆ ಜನ ಬರುವುದಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಈ ಪ್ರದೇಶದಲ್ಲಿ ದ್ವಿಪಥದಿಂದ ಕೂಡಿದ ಎಲ್ಲ ರಸ್ತೆಗಳನ್ನು ಚತುಷ್ಪಥಗೊಳಿಸುತ್ತೇವೆ. ಬೈಯಪ್ಪನಹಳ್ಳಿಯಲ್ಲಿ ರೈಲ್ವೆ ಮೇಲ್ಸೇತುವೆ ಹಾಗೂ ಕೆ.ಆರ್.ಪುರದ ಬಳಿ ಐಒಸಿ ಜಂಕ್ಷನ್ನಲ್ಲಿ ರೋಟರಿ ಫ್ಲೈಓವರ್ ನಿರ್ಮಿಸುತ್ತೇವೆ’ ಎಂದರು.