‘ರಾಜಾನುಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 6ರಿಂದ 7 ಅಂತಸ್ತಿನ ಮನೆಗಳು ನಿರ್ಮಾಣವಾಗುತ್ತಿವೆ. ಬಹುಮಹಡಿಗಳನ್ನು ಕಟ್ಟಿ ಮನೆಗಳನ್ನು ಬಾಡಿಗೆ ನೀಡುತ್ತಿದ್ದಾರೆ. ಆದರೆ, ಈ ಕಟ್ಟಡಗಳ ಮಾಲೀಕರು ಪಂಚಾಯಿತಿಗೆ ಕಂದಾಯವನ್ನು ಕಟ್ಟುತ್ತಿಲ್ಲ. ಇಂತಹ ಅನಧಿಕೃತ ಕಟ್ಟಡಗಳ ಮಾಲೀಕರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಬೇಕು’ ಎಂದು ಸುರಧೇನುಪುರ ಗ್ರಾಮದ ನಿವಾಸಿ ಮಾರಣ್ಣ ಅಗ್ರಹಿಸಿದರು.