‘ಬಸವೇಶ್ವರ ನಗರದಲ್ಲಿರುವ ಆಕ್ಸಿಸ್ ಬ್ಯಾಂಕಿನಲ್ಲಿ ಅಕ್ಕನ ಮಗ ಕಾರ್ತಿಕ್ನ ಹೆಸರಿನ ಖಾತೆಯಲ್ಲಿದ್ದ ₹ 5.20 ಲಕ್ಷ ಡ್ರಾ ಮಾಡಿ ಪರ್ಸ್ನಲ್ಲಿ ಇಟ್ಟುಕೊಂಡು ಕಾರಿನಲ್ಲಿ ಹೋಗುತ್ತಿದ್ದೆ. ಈ ವೇಳೆ, ಸವಾರನೊಬ್ಬ ತನ್ನ ಬೈಕ್ ಅನ್ನು ಕಾರಿಗೆ ಗುದ್ದಿಸಿ ಗಲಾಟೆ ಮಾಡಿದ್ದ. ಅದೇ ವೇಳೆಗೆ ಇನ್ನೂ 3–4 ಮಂದಿ ಅಲ್ಲಿಗೆ ಬಂದು ಮತ್ತಷ್ಟು ಗಲಾಟೆ ಮಾಡಿದ್ದರು. ಈ ವೇಳೆ ಕಾರಿನೊಳಗಿದ್ದ ಪರ್ಸ್ ಅನ್ನು ಅಪರಿಚಿತರು ತೆಗೆದುಕೊಂಡು ಹೋಗಿದ್ದಾರೆ. ಪರ್ಸ್ನಲ್ಲಿ ಆ ಹಣದ ಜೊತೆಗೆ ಇನ್ನೂ ₹50 ಸಾವಿರ ನಗದು, ಚಿನ್ನದ ಓಲೆ, ಮೊಬೈಲ್, ಚೆಕ್ ಪುಸ್ತಕಇದ್ದವು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.