‘ಶ್ರೀನಿವಾಸ್ ಅವರ ಕಾರನ್ನು (ಕೆಎ 51 ಎಂಕೆ 5416) ಮುಖೇಶ್ ಚಲಾಯಿಸುತ್ತಿದ್ದ. ಇಟ್ಟಮಡು ಜಂಕ್ಷನ್ ಸಮೀಪದಲ್ಲಿ ಅತೀ ವೇಗದಲ್ಲಿ ಕಾರು ಚಲಾಯಿಸಿ, ರಸ್ತೆ ಪಕ್ಕದಲ್ಲಿ ಹೊರಟಿದ್ದ ಪಾದಚಾರಿಗಳಿಗೆ ಗುದ್ದಿಸಿದ್ದ. ನಾಲ್ವರು ಪಾದಚಾರಿಗಳು ಹಾರಿ ದೂರಕ್ಕೆ ಹೋಗಿ ಬಿದ್ದಿದ್ದರು. ಅದೇ ಕಾರು, ಎರಡು ಬೈಕ್ ಹಾಗೂ ಇನ್ನೊಂದು ಕಾರಿಗೂ ಡಿಕ್ಕಿ ಹೊಡೆದಿತ್ತು. ಜಖಂಗೊಂಡ ಕಾರು, ವಿದ್ಯುತ್ ಕಂಬಕ್ಕೂ ಗುದ್ದಿತ್ತು’ ಎಂದೂ ಹೇಳಿದರು.