‘ಜಕ್ಕೂರು ಲೇಔಟ್ ನಿವಾಸಿ ಮುನಿಯಮ್ಮ, ಮೊಮ್ಮಗಳ ಜೊತೆಯಲ್ಲಿ ಶಿಡ್ಲಘಟ್ಟದಿಂದ ಬೆಂಗಳೂರಿಗೆ ಬಂದಿದ್ದರು. ಬಳ್ಳಾರಿ ರಸ್ತೆಯಲ್ಲಿ ಬಸ್ನಿಂದ ಇಳಿದು ಮನೆಯತ್ತ ನಡೆದುಕೊಂಡು ಹೊರಟಿದ್ದರು. ಅದೇ ಸಂದರ್ಭದಲ್ಲೇ ಕಾರೊಂದು ಮುನಿಯಮ್ಮ ಅವರಿಗೆ ಗುದ್ದಿತ್ತು. ಅವರು ರಸ್ತೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅದೃಷ್ಟವಶಾತ್ ಮೊಮ್ಮಗಳು ಅಪಾಯದಿಂದ ಪಾರಾಗಿದ್ದಾರೆ.’