'ವೇಗವಾಗಿ ಬಂದಿದ್ದ ಕಾರು ಆಟೊಗೆ ಗುದ್ದಿ ಉಜ್ಜಿಕೊಂಡು ಹೋಗಿದೆ. ನಂತರ, ಪಾದಚಾರಿ ಮಾರ್ಗ ಏರಿ ಗೋಡೆಗೆ ಡಿಕ್ಕಿ ಹೊಡೆದಿದೆ. ಸ್ಥಳೀಯರು ಸ್ಥಳದಲ್ಲಿ ಸೇರುತ್ತಿದ್ದಂತೆ ಯುವಕರು ಓಡಿಹೋಗಿದ್ದಾರೆ. ಯುವಕರು ಕುಡಿದ ಅಮಲಿನಲ್ಲಿದ್ದರು ಎಂಬುದಾಗಿ ಸ್ಥಳೀಯರು ಹೇಳಿಕೆ ನೀಡಿದ್ದಾರೆ' ಎಂದು ಮಲ್ಲೇಶ್ವರ ಸಂಚಾರ ಪೊಲೀಸರು ಹೇಳಿದರು.