ಬೆಂಗಳೂರು: ಪಂತರಪಾಳ್ಯಸಮೀಪ ಭಾನುವಾರ ಬೆಂಕಿ ತಗುಲಿ ಕಾರೊಂದು ಸುಟ್ಟಿದ್ದು, ಕಾರಿನಲ್ಲಿದ್ದ ಮೂವರು ಅಪಾಯದಿಂದ ಪಾರಾಗಿದ್ದಾರೆ.
‘ಚಂದ್ರಾಲೇಔಟ್ ನಿವಾಸಿ ನಿರಂಜನ್ ಎಂಬುವರು ತಾಯಿ ಮತ್ತು ಪತ್ನಿ ಜತೆ ಭಾನುವಾರ ಬೆಳಿಗ್ಗೆ ಕಾರಿನಲ್ಲಿ ರಾಮನಗರಕ್ಕೆ ತೆರಳುತ್ತಿದ್ದರು. ಬೆಳಿಗ್ಗೆ 9 ಗಂಟೆಗೆ ಪಂತರಪಾಳ್ಯ ಬಳಿ ಕಾರಿನ ಎಂಜಿನ್ನಲ್ಲಿ ಹೊಗೆ ಕಾಣಿಸಿಕೊಂಡಿತ್ತು. ಕಾರು ನಿಲ್ಲಿಸಿ ನೋಡುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿತ್ತು’ ಎಂದು ಬ್ಯಾಟರಾಯಪುರ ಪೊಲೀಸರು ಹೇಳಿದರು.
‘ಬೆಂಕಿ ಹೆಚ್ಚಾಗುತ್ತಿದ್ದಂತೆ ನಿರಂಜನ್ ಅವರು ತಮ್ಮ ತಾಯಿ ಮತ್ತು ಪತ್ನಿಯನ್ನು ಕಾರಿನಿಂದ ಕೆಳಗೆ ಇಳಿಸಿದ್ದರು. ನಂತರ, ಕಾರು ಸಂಪೂರ್ಣ ಸುಟ್ಟಿತು. ಎಂಜಿನ್ನಲ್ಲಿ ಶಾರ್ಟ್ ಸರ್ಕೀಟ್ನಿಂದ ಅವಘಡ ಸಂಭವಿಸಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ’ ಎಂದೂ ತಿಳಿಸಿದರು.