ಈಶ ಫೌಂಡೇಷನ್ನ ಸಂಸ್ಥಾಪಕ ಸದ್ಗುರು ಈ ಅಭಿಯಾನದ ನೇತೃತ್ವ ವಹಿಸಿದ್ದು,ಕಾವೇರಿ ನದಿಯ ಇಕ್ಕೆಲಗಳಲ್ಲಿ 242 ಕೋಟಿ ಮರಗಳನ್ನು ಬೆಳೆಸುವ ಗುರಿಯನ್ನು ಫೌಂಡೇಷನ್ ಹಾಕಿಕೊಂಡಿದೆ.ನದಿಪಾತ್ರದ 83 ಸಾವಿರ ಚ.ಕಿ.ಮೀ. ವ್ಯಾಪ್ತಿಯಲ್ಲಿ ಕಾಡು ಬೆಳೆದರೆ ನದಿಯ ನೀರಿನ ಮಟ್ಟ ಏರಿಕೆಯಾಗುವುದಲ್ಲದೇ ರೈತರ ಆದಾಯವೂ ವೃದ್ಧಿಯಾಗಲಿದೆ ಎನ್ನುವುದು ಅಭಿಯಾನದ ಹಿಂದಿನ ಉದ್ದೇಶ.