<p><strong>ಬೆಂಗಳೂರು</strong>: ನಗರದ ಹೊರ ವಲಯದಲ್ಲಿರುವ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು ರೂಪಿಸಿರುವ ಕಾವೇರಿ 5ನೇ ಹಂತದ ಯೋಜನೆಗೆ ಸುಮಾರು ಒಂದೂವರೆ ವರ್ಷದ ಹಿಂದೆಯೇ ಚಾಲನೆ ನೀಡಲಾಗಿದೆ. ಆದರೆ, ನೀರಿನ ಸಂಪರ್ಕ ಪಡೆಯಲು ಸಾರ್ವಜನಿಕರು ಮುಂದೆ ಬರುತ್ತಿಲ್ಲ.</p>.<p>18 ವರ್ಷದ ಹಿಂದೆಯೇ ಈ ಹಳ್ಳಿಗಳನ್ನು ಜಿಬಿಎ (ಹಿಂದಿನ ಬಿಬಿಪಿಎಂ) ವ್ಯಾಪ್ತಿಗೆ ಸೇರಿಸಿ ಕಾವೇರಿ ನೀರು ಪೂರೈಸಲು ಅನುಮತಿ ನೀಡಲಾಗಿದೆ. 5ನೇ ಹಂತದ ಯೋಜನೆಯಡಿ ಒಟ್ಟು 2.50 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲು ಜಲಮಂಡಳಿ ಉದ್ದೇಶಿಸಿತ್ತು. ಆದರೆ, ಇದುವರೆಗೆ 90 ಸಾವಿರ ಮನೆಗಳಿಗೆ ಸಂಪರ್ಕ ಕಲ್ಪಿಸಿದ್ದು ಶೇ 35ರಷ್ಟು ಗುರಿ ಸಾಧನೆಯಾಗಿದೆ.</p>.<p>ಈ ಯೋಜನೆಯಡಿ ನಿತ್ಯ 775 ಎಂಎಲ್ಡಿ ನೀರು ಬಳಕೆಗೆ ಅವಕಾಶವಿದೆ. ಆದರೆ, 250 ಎಂಎಲ್ಡಿ ನೀರು ಮಾತ್ರ ಬಳಕೆಯಾಗುತ್ತಿದೆ. ಶೇ 90ಕ್ಕೂ ಅಧಿಕ ಪೈಪ್ಲೈನ್ ಕಾಮಗಾರಿ ಮುಗಿದಿದ್ದು, ಕೆಲವು ಕಡೆ ಮೂರು ತಿಂಗಳ ಹಿಂದೆ ನೀರು ಪೂರೈಕೆ ಶುರುವಾಗಿದೆ. ಇನ್ನಷ್ಟು ಕಡೆ ಆರಂಭವಾಗಬೇಕಿದೆ. ಕೆಲವು ಹಳ್ಳಿಗಳಲ್ಲಿ ಪೈಪ್ಲೈನ್ ಅಳವಡಿಸಿ ನೀರು ಹರಿಸುವ ಪ್ರಯೋಗ ಮುಂದುವರಿದಿದೆ. </p>.<p><strong>ಜನರ ಹಿಂದೇಟು:</strong> ಮಹದೇವಪುರ, ಬೆಂಗಳೂರು ದಕ್ಷಿಣ, ಯಶವಂತಪುರ, ಬ್ಯಾಟರಾಯನಪುರ, ದಾಸರಹಳ್ಳಿ, ಯಲಹಂಕ, ಕೃಷ್ಣರಾಜಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆಲವು ಅಪ್ಪಟ ಹಳ್ಳಿಗಳಿವೆ. ಅವುಗಳ ಸುತ್ತಮುತ್ತ ಬೆಳೆದಿರುವ ಬಡಾವಣೆಗಳು ಹಾಗೂ ಅಪಾರ್ಟ್ಮೆಂಟ್ಗಳನ್ನು ಗುರಿಯಾಗಿಟ್ಟುಕೊಂಡು ಸಂಪರ್ಕ ನೀಡಲಾಗುತ್ತಿದೆ. </p>.<p>ಬಹುತೇಕ ಕಡೆ ಮನೆ ಮುಂದೆಯೇ ಕಾವೇರಿ ನೀರಿನ ಸಂಪರ್ಕ ಹೋಗಿದೆ. ಸಂಪರ್ಕ ಪಡೆದ ಮನೆಗಳನ್ನು ಬಿಟ್ಟರೆ ಇತರೆಡೆ ನೀರು ಹರಿಯದಂತೆ ಮುಚ್ಚಳಗಳನ್ನು ಹಾಕಲಾಗಿದೆ. ಅನಧಿಕೃತವಾಗಿ ಬಳಸುವವರ ಮೇಲೂ ನಿಗಾ ವಹಿಸಲಾಗುತ್ತಿದೆ. ಎಲ್ಲಿಯೂ ಕೊಳವೆ ಬಾವಿ ನೀರು ಬಂದ್ ಮಾಡಿಲ್ಲ. ಆದರೆ, ಕಾವೇರಿ ನೀರಿನ ಸಂಪರ್ಕ ಪಡೆಯದೇ ಇದ್ದರೆ, ಮುಂದೆ ಕೊಳವೆ ಬಾವಿಯ ನೀರನ್ನು ಸ್ಥಗಿತಗೊಳಿಸುವ ಎಚ್ಚರಿಕೆ ನೀಡಲಾಗಿದೆ.</p>.<p>ಮಂಡಳಿಯು ನಿರಂತರವಾಗಿ ಪ್ರಯತ್ನ ಮಾಡಿದರೂ, ಜನರು ಹೊಸ ಸಂಪರ್ಕ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕಾಗಿ ಒಂದೆರಡು ಲಕ್ಷ ಹೊಂದಿಸುವುದು ಹೇಗೆ ಎನ್ನುವ ಆತಂಕ ಹಳ್ಳಿಯ ಜನರನ್ನು ಕಾಡುತ್ತಿದೆ.</p>.<p>ಈ ಹಿಂದೆ ನೀಡಿದ್ದ ಬೋರ್ವೆಲ್ ವ್ಯವಸ್ಥೆಯಿದ್ದು, ವಾರದಲ್ಲಿ ಎರಡು ದಿನ ನೀರು ಬರುತ್ತಿದೆ. ಬಂದಾಗ ತುಂಬಿಸಿ ಇಟ್ಟುಕೊಳ್ಳೊಣ. ಅಗತ್ಯ ಬಿದ್ದರೆ ಟ್ಯಾಂಕರ್ ನೀರು ಅವಲಂಬಿಸಿದರಾಯಿತು ಎನ್ನುವ ಮನೋಭಾವ ಗೊಲ್ಲರಹಟ್ಟಿ, ಹೆರೋಹಳ್ಳಿ, ಸಿಂಗಸಂದ್ರ, ಬೇಗೂರು, ಹೊಂಗಸಂದ್ರ, ಮಂಗಮ್ಮನಪಾಳ್ಯ, ರೂಪೇನ ಅಗ್ರಹಾರ, ಕೆಂಪಾಪುರ ಸೇರಿದಂತೆ ಹಲವು ಗ್ರಾಮಗಳ ಜನರಲ್ಲಿ ಇದೆ.</p>.<p>‘ಜಲಮಂಡಳಿ ಪಶ್ಚಿಮ ವಲಯ ವ್ಯಾಪ್ತಿಯ ಅಂದ್ರಹಳ್ಳಿಯಲ್ಲಿ ಹೊಸ ಪೈಪ್ಲೈನ್ ಹಾಕಿ ವರ್ಷದ ನಂತರ ಪಿವಿಸಿ ಪೈಪ್ ಅಳವಡಿಸಲಾಗಿದೆ. ಎರಡು ಬಾರಿ ಪೈಪ್ ಹಾಕಿ ಖರ್ಚು ಮಾಡಲಾಗುತ್ತಿದೆ. ಇದರಿಂದ ನಮಗಿನ್ನೂ ಕಾವೇರಿ ನೀರು ಬಂದಿಲ್ಲ’ ಎಂದು ಸ್ಥಳೀಯರು ಆರೋಪಿಸಿದರು.</p>.<p>5 ರಿಂದ 10 ಮನೆಗಳಿರುವ ಸಣ್ಣ ಅಪಾರ್ಟ್ಮೆಂಟ್ನವರು ಬೋರ್ವೆಲ್ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಅಲ್ಲದೆ ಸಂಚಾರಿ ಕಾವೇರಿ ನೀರಿನ ಟ್ಯಾಂಕರ್ ಸೌಲಭ್ಯ ಪಡೆಯುತ್ತಿದ್ದಾರೆ.</p>.<p><strong>ಕೆಲವಡೆ ಸುಧಾರಣೆ:</strong> ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವರ್ತೂರು, ಬೆಳ್ಳಂದೂರು, ವೈಟ್ಫೀಲ್ಡ್, ದಾಸರಹಳ್ಳಿ ಕ್ಷೇತ್ರ ವ್ಯಾಪ್ತಿಯ ಶೆಟ್ಟಿಹಳ್ಳಿ, ಸಿಡೇದಹಳ್ಳಿ, ಲಕ್ಷ್ಮೀಪುರ ಭಾಗದಲ್ಲಿ ನೀರಿನ ಸಂಪರ್ಕ ಪಡೆಯಲಾಗಿದೆ. </p>.<p>ಕೆಂಗೇರಿ, ಉಲ್ಲಾಳ ಇತ್ಯಾದಿ ಕಡೆ ಯೋಜನೆ ಜಾರಿಯಾದ ಮೇಲೆ ನೀರಿನ ಸಮಸ್ಯೆ ಕಡಿಮೆಯಾಗಿದೆ. ಬ್ಯಾಡರಹಳ್ಳಿ, ಗೊಲ್ಲರಹಟ್ಟಿ ಭಾಗದಲ್ಲಿ ನೀರಿನ ಸಂಪರ್ಕ ಪಡೆಯುವಂತೆ ಮನವೊಲಿಸುವ ಕಾರ್ಯ ನಡೆದಿದೆ.</p>.<p>‘ನಾವು 18 ವರ್ಷದಿಂದ ಇಲ್ಲಿ ನೆಲಸಿದ್ದರೂ, ಒಂದೂವರೆ ವರ್ಷದಿಂದ ಮಾತ್ರ ಕಾವೇರಿ ನೀರು ಸಿಗುತ್ತಿದೆ. ಕಳೆದ ಬೇಸಿಗೆಯಲ್ಲಿ ಸಮಸ್ಯೆಯಾಗಿರಲಿಲ್ಲ. ವಾರದಲ್ಲಿ ಮೂರು ದಿನವಾದರೂ ನೀರು ಸಿಗುತ್ತಿದೆ ಎನ್ನುವ ಸಮಾಧಾನವಿದೆ’ ಎಂದು ಹೆಸರಘಟ್ಟ ಸಮೀಪದ ಸಿಡೇದಹಳ್ಳಿ ನಿವಾಸಿ ಪಿ.ಆರ್.ಅನನ್ಯ ತಿಳಿಸಿದರು.</p>.<p><strong>ಜಲಜಾಗೃತಿ ನಿರಂತರ</strong>: ಶುದ್ದ ಕಾವೇರಿ ನೀರು ಬಳಕೆಯಿಂದ ಆಗುವ ಲಾಭ, ನೀರಿನ ಸಂಪರ್ಕ ಪಡೆಯುವುದರಿಂದ ಆಗುವ ಆರ್ಥಿಕ ಬದಲಾವಣೆ, ಇಎಂಐ ಸೌಲಭ್ಯ ಇತ್ಯಾದಿಗಳ ಬಗ್ಗೆ 100ಕ್ಕೂ ಹೆಚ್ಚು ಹಳ್ಳಿಗಳಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಿ, ಜನರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ.</p>.<p>ಹೆಚ್ಚಾಗಿ ಸಂಪರ್ಕ ಬಾಕಿ ಇರುವ ಪ್ರದೇಶಗಳನ್ನು ಗುರುತಿಸಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಅಂದ್ರಹಳ್ಳಿ ಭಾಗದಲ್ಲಿ ಸಂಪರ್ಕ ಪ್ರಮಾಣ ಕಡಿಮೆ ಇರುವುದರಿಂದ ಅಲ್ಲಿಯೂ ಕಚೇರಿ ಸ್ಥಾಪಿಸಲಾಗಿದೆ.</p>.<p>‘ಜಲಮಂಡಳಿ ಅಧ್ಯಕ್ಷರು ಬೇಸಿಗೆಯಲ್ಲೇ ಹೆಚ್ಚು ಸಂಪರ್ಕ ನೀಡುವಂತೆ ಸೂಚಿಸಿದ್ದರು. ಆದಷ್ಟು ಬೇಗನೇ ಯೋಜನೆ ಪೂರ್ಣಗೊಳಿಸುವ ಗುರಿ ಇಟ್ಟುಕೊಂಡಿದ್ದರೂ ಜನರ ಮನವೊಲಿಸುವುದು ಕಷ್ಟ. ಉಚಿತ ನೀರಿನ ಸೌಲಭ್ಯ ಪಡೆಯುತ್ತಿರುವವರು, ಮನೆಯಲ್ಲಿ ಬೋರ್ವೆಲ್ ಇದ್ದವರು ಸಂಪರ್ಕ ಪಡೆಯಲು ಒಪ್ಪುತ್ತಿಲ್ಲ’ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.</p>.<p>ಇಲ್ಲಿಯೇ ಹುಟ್ಟಿ ಬೆಳೆದರೂ ಕಾವೇರಿ ನೀರನ್ನು ಈವರೆಗೂ ಕುಡಿದಿರಲಿಲ್ಲ. ಮೂರು ತಿಂಗಳ ಹಿಂದೆ ಸಂಪರ್ಕ ಕೊಟ್ಟು ಶನಿವಾರ ಭಾನುವಾರ ನೀರು ಕೊಡುತ್ತಿದ್ದಾರೆ. ಮೀಟರ್ ಅಳವಡಿಸಿಲ್ಲ. ಜಲಮಂಡಳಿ ಶುಲ್ಕ ಪಾವತಿಸಲು ಸಿದ್ದರಿದ್ದೇವೆ</p><p>--ಅನಿಲ್.ಖಾಸಗಿ ಉದ್ಯೋಗಿ ಅಂದ್ರಹಳ್ಳಿ</p>.<p>ಎರಡು ವರ್ಷದಿಂದ ನಮ್ಮಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿತ್ತು. ಈಗ ಶೇ 80ರಷ್ಟು ಮಂದಿ ಕಾವೇರಿ ಸಂಪರ್ಕ ಪಡೆದಿದ್ದಾರೆ. ಉಳಿದವರಿಗೂ ಸಂಪರ್ಕ ಪಡೆಯುವಂತೆ ಮನವಿ ಮಾಡಲಾಗುತ್ತಿದೆ.</p><p>-ಮಲ್ಲೇಶ ಮುಖಂಡ ಬ್ಯಾಡರಹಳ್ಳಿ</p>.<p>ಯಶವಂತಪುರ ಕ್ಷೇತ್ರ ವ್ಯಾಪ್ತಿಯ 19 ಹಳ್ಳಿಗಳಿಗೆ ಕಾವೇರಿ ನೀರು ಸಂಪರ್ಕ ಕಲ್ಪಿಸಲಾಗಿದ್ದು ಸಂಪರ್ಕ ಪಡೆಯುವವರ ಸಂಖ್ಯೆ ಹೆಚ್ಚಿಸಬೇಕಿದೆ. ಜಲಮಂಡಳಿ ರಿಯಾಯಿತಿ ಯೋಜನೆಗಳನ್ನು ಪ್ರಕಟಿಸಿದ್ದು ನಾವು ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ</p><p>-ಎಸ್.ಟಿ.ಸೋಮಶೇಖರ್ ಶಾಸಕ</p>.<p>ದಾಸರಹಳ್ಳಿ ಕ್ಷೇತ್ರದ ಆರು ಹಳ್ಳಿಗಳಲ್ಲಿ ಸಂಪರ್ಕ ನೀಡಿದ್ದು ಹೆಚ್ಚಿನ ಜನ ಕಾವೇರಿ ನೀರು ಬಳಸುತ್ತಿದ್ದಾರೆ. ನಮಗೆ ಮೂರು ವರ್ಷದ ಹಿಂದೆ ನಿತ್ಯ 100 ದೂರು ನೀರಿಗಾಗಿ ಬರುತ್ತಿದ್ದವು. ಈ ಬೇಸಿಗೆಯಲ್ಲಿ ಅದು ಬಹುತೇಕ ಕಡಿಮೆಯಾಗಿದೆ.</p><p>-ಮುನಿರಾಜು ದಾಸರಹಳ್ಳಿ ಕ್ಷೇತ್ರದ ಶಾಸಕ</p>.<p>110 ಹಳ್ಳಿಗಳಿಗೆ ಕಾವೇರಿ ನೀರಿನ ಸಂಪರ್ಕ ನೀಡುವ ಯೋಜನೆ ಪ್ರಗತಿಯಲ್ಲಿದೆ. ಹೆಚ್ಚಿನ ಜನರಿಗೆ ಕಾವೇರಿ ನೀರು ಸಿಗುತ್ತಿದೆ. ಸಂಪರ್ಕ ಪಡೆಯಲು ಹಿಂದೇಟು ಹಾಕುತ್ತಿರುವವರ ಮನವೊಲಿಸಲು ಮಂಡಳಿ ಹಲವು ಯೋಜನೆಗಳನ್ನು ಪ್ರಕಟಿಸಿದೆ</p><p>-ಡಾ.ರಾಮಪ್ರಸಾತ್ ಮನೋಹರ್ ಅಧ್ಯಕ್ಷ ಜಲಮಂಡಳಿ</p>.<p>ಕೆಲವೆಡೆ ವಿಳಂಬ</p><p>ಮಹದೇವಪುರ ಕ್ಷೇತ್ರದ ಕಾಡುಗೋಡಿ ಬಳಿ ಅರಣ್ಯ ಪ್ರದೇಶದಲ್ಲಿ ಪೈಪ್ಲೈನ್ ಅಳವಡಿಸಬೇಕಾಗಿದ್ದು ಅನುಮತಿ ನೀಡುವುದು ವಿಳಂಬವಾದ ಕಾರಣ 4 ಹಳ್ಳಿಯಲ್ಲಿ ಯೋಜನೆ ಜಾರಿಯಾಗಿಲ್ಲ. ಚೊಕ್ಕನಹಳ್ಳಿ ಭಾಗದಲ್ಲಿ ರೈತರ ಭೂಮಿಯಲ್ಲಿ ಪೈಪ್ಲೈನ್ ಹೋಗಬೇಕಾಗಿದ್ದರಿಂದ ಭೂ ಮಾಲೀಕರೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯವು ಯೋಜನೆಗೆ ಅನುಮತಿ ನೀಡಿದ್ದು ಕಾಮಗಾರಿ ಶುರುವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ನಗರದ ಹೊರ ವಲಯದಲ್ಲಿರುವ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಲು ರೂಪಿಸಿರುವ ಕಾವೇರಿ 5ನೇ ಹಂತದ ಯೋಜನೆಗೆ ಸುಮಾರು ಒಂದೂವರೆ ವರ್ಷದ ಹಿಂದೆಯೇ ಚಾಲನೆ ನೀಡಲಾಗಿದೆ. ಆದರೆ, ನೀರಿನ ಸಂಪರ್ಕ ಪಡೆಯಲು ಸಾರ್ವಜನಿಕರು ಮುಂದೆ ಬರುತ್ತಿಲ್ಲ.</p>.<p>18 ವರ್ಷದ ಹಿಂದೆಯೇ ಈ ಹಳ್ಳಿಗಳನ್ನು ಜಿಬಿಎ (ಹಿಂದಿನ ಬಿಬಿಪಿಎಂ) ವ್ಯಾಪ್ತಿಗೆ ಸೇರಿಸಿ ಕಾವೇರಿ ನೀರು ಪೂರೈಸಲು ಅನುಮತಿ ನೀಡಲಾಗಿದೆ. 5ನೇ ಹಂತದ ಯೋಜನೆಯಡಿ ಒಟ್ಟು 2.50 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲು ಜಲಮಂಡಳಿ ಉದ್ದೇಶಿಸಿತ್ತು. ಆದರೆ, ಇದುವರೆಗೆ 90 ಸಾವಿರ ಮನೆಗಳಿಗೆ ಸಂಪರ್ಕ ಕಲ್ಪಿಸಿದ್ದು ಶೇ 35ರಷ್ಟು ಗುರಿ ಸಾಧನೆಯಾಗಿದೆ.</p>.<p>ಈ ಯೋಜನೆಯಡಿ ನಿತ್ಯ 775 ಎಂಎಲ್ಡಿ ನೀರು ಬಳಕೆಗೆ ಅವಕಾಶವಿದೆ. ಆದರೆ, 250 ಎಂಎಲ್ಡಿ ನೀರು ಮಾತ್ರ ಬಳಕೆಯಾಗುತ್ತಿದೆ. ಶೇ 90ಕ್ಕೂ ಅಧಿಕ ಪೈಪ್ಲೈನ್ ಕಾಮಗಾರಿ ಮುಗಿದಿದ್ದು, ಕೆಲವು ಕಡೆ ಮೂರು ತಿಂಗಳ ಹಿಂದೆ ನೀರು ಪೂರೈಕೆ ಶುರುವಾಗಿದೆ. ಇನ್ನಷ್ಟು ಕಡೆ ಆರಂಭವಾಗಬೇಕಿದೆ. ಕೆಲವು ಹಳ್ಳಿಗಳಲ್ಲಿ ಪೈಪ್ಲೈನ್ ಅಳವಡಿಸಿ ನೀರು ಹರಿಸುವ ಪ್ರಯೋಗ ಮುಂದುವರಿದಿದೆ. </p>.<p><strong>ಜನರ ಹಿಂದೇಟು:</strong> ಮಹದೇವಪುರ, ಬೆಂಗಳೂರು ದಕ್ಷಿಣ, ಯಶವಂತಪುರ, ಬ್ಯಾಟರಾಯನಪುರ, ದಾಸರಹಳ್ಳಿ, ಯಲಹಂಕ, ಕೃಷ್ಣರಾಜಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆಲವು ಅಪ್ಪಟ ಹಳ್ಳಿಗಳಿವೆ. ಅವುಗಳ ಸುತ್ತಮುತ್ತ ಬೆಳೆದಿರುವ ಬಡಾವಣೆಗಳು ಹಾಗೂ ಅಪಾರ್ಟ್ಮೆಂಟ್ಗಳನ್ನು ಗುರಿಯಾಗಿಟ್ಟುಕೊಂಡು ಸಂಪರ್ಕ ನೀಡಲಾಗುತ್ತಿದೆ. </p>.<p>ಬಹುತೇಕ ಕಡೆ ಮನೆ ಮುಂದೆಯೇ ಕಾವೇರಿ ನೀರಿನ ಸಂಪರ್ಕ ಹೋಗಿದೆ. ಸಂಪರ್ಕ ಪಡೆದ ಮನೆಗಳನ್ನು ಬಿಟ್ಟರೆ ಇತರೆಡೆ ನೀರು ಹರಿಯದಂತೆ ಮುಚ್ಚಳಗಳನ್ನು ಹಾಕಲಾಗಿದೆ. ಅನಧಿಕೃತವಾಗಿ ಬಳಸುವವರ ಮೇಲೂ ನಿಗಾ ವಹಿಸಲಾಗುತ್ತಿದೆ. ಎಲ್ಲಿಯೂ ಕೊಳವೆ ಬಾವಿ ನೀರು ಬಂದ್ ಮಾಡಿಲ್ಲ. ಆದರೆ, ಕಾವೇರಿ ನೀರಿನ ಸಂಪರ್ಕ ಪಡೆಯದೇ ಇದ್ದರೆ, ಮುಂದೆ ಕೊಳವೆ ಬಾವಿಯ ನೀರನ್ನು ಸ್ಥಗಿತಗೊಳಿಸುವ ಎಚ್ಚರಿಕೆ ನೀಡಲಾಗಿದೆ.</p>.<p>ಮಂಡಳಿಯು ನಿರಂತರವಾಗಿ ಪ್ರಯತ್ನ ಮಾಡಿದರೂ, ಜನರು ಹೊಸ ಸಂಪರ್ಕ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕಾಗಿ ಒಂದೆರಡು ಲಕ್ಷ ಹೊಂದಿಸುವುದು ಹೇಗೆ ಎನ್ನುವ ಆತಂಕ ಹಳ್ಳಿಯ ಜನರನ್ನು ಕಾಡುತ್ತಿದೆ.</p>.<p>ಈ ಹಿಂದೆ ನೀಡಿದ್ದ ಬೋರ್ವೆಲ್ ವ್ಯವಸ್ಥೆಯಿದ್ದು, ವಾರದಲ್ಲಿ ಎರಡು ದಿನ ನೀರು ಬರುತ್ತಿದೆ. ಬಂದಾಗ ತುಂಬಿಸಿ ಇಟ್ಟುಕೊಳ್ಳೊಣ. ಅಗತ್ಯ ಬಿದ್ದರೆ ಟ್ಯಾಂಕರ್ ನೀರು ಅವಲಂಬಿಸಿದರಾಯಿತು ಎನ್ನುವ ಮನೋಭಾವ ಗೊಲ್ಲರಹಟ್ಟಿ, ಹೆರೋಹಳ್ಳಿ, ಸಿಂಗಸಂದ್ರ, ಬೇಗೂರು, ಹೊಂಗಸಂದ್ರ, ಮಂಗಮ್ಮನಪಾಳ್ಯ, ರೂಪೇನ ಅಗ್ರಹಾರ, ಕೆಂಪಾಪುರ ಸೇರಿದಂತೆ ಹಲವು ಗ್ರಾಮಗಳ ಜನರಲ್ಲಿ ಇದೆ.</p>.<p>‘ಜಲಮಂಡಳಿ ಪಶ್ಚಿಮ ವಲಯ ವ್ಯಾಪ್ತಿಯ ಅಂದ್ರಹಳ್ಳಿಯಲ್ಲಿ ಹೊಸ ಪೈಪ್ಲೈನ್ ಹಾಕಿ ವರ್ಷದ ನಂತರ ಪಿವಿಸಿ ಪೈಪ್ ಅಳವಡಿಸಲಾಗಿದೆ. ಎರಡು ಬಾರಿ ಪೈಪ್ ಹಾಕಿ ಖರ್ಚು ಮಾಡಲಾಗುತ್ತಿದೆ. ಇದರಿಂದ ನಮಗಿನ್ನೂ ಕಾವೇರಿ ನೀರು ಬಂದಿಲ್ಲ’ ಎಂದು ಸ್ಥಳೀಯರು ಆರೋಪಿಸಿದರು.</p>.<p>5 ರಿಂದ 10 ಮನೆಗಳಿರುವ ಸಣ್ಣ ಅಪಾರ್ಟ್ಮೆಂಟ್ನವರು ಬೋರ್ವೆಲ್ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಅಲ್ಲದೆ ಸಂಚಾರಿ ಕಾವೇರಿ ನೀರಿನ ಟ್ಯಾಂಕರ್ ಸೌಲಭ್ಯ ಪಡೆಯುತ್ತಿದ್ದಾರೆ.</p>.<p><strong>ಕೆಲವಡೆ ಸುಧಾರಣೆ:</strong> ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವರ್ತೂರು, ಬೆಳ್ಳಂದೂರು, ವೈಟ್ಫೀಲ್ಡ್, ದಾಸರಹಳ್ಳಿ ಕ್ಷೇತ್ರ ವ್ಯಾಪ್ತಿಯ ಶೆಟ್ಟಿಹಳ್ಳಿ, ಸಿಡೇದಹಳ್ಳಿ, ಲಕ್ಷ್ಮೀಪುರ ಭಾಗದಲ್ಲಿ ನೀರಿನ ಸಂಪರ್ಕ ಪಡೆಯಲಾಗಿದೆ. </p>.<p>ಕೆಂಗೇರಿ, ಉಲ್ಲಾಳ ಇತ್ಯಾದಿ ಕಡೆ ಯೋಜನೆ ಜಾರಿಯಾದ ಮೇಲೆ ನೀರಿನ ಸಮಸ್ಯೆ ಕಡಿಮೆಯಾಗಿದೆ. ಬ್ಯಾಡರಹಳ್ಳಿ, ಗೊಲ್ಲರಹಟ್ಟಿ ಭಾಗದಲ್ಲಿ ನೀರಿನ ಸಂಪರ್ಕ ಪಡೆಯುವಂತೆ ಮನವೊಲಿಸುವ ಕಾರ್ಯ ನಡೆದಿದೆ.</p>.<p>‘ನಾವು 18 ವರ್ಷದಿಂದ ಇಲ್ಲಿ ನೆಲಸಿದ್ದರೂ, ಒಂದೂವರೆ ವರ್ಷದಿಂದ ಮಾತ್ರ ಕಾವೇರಿ ನೀರು ಸಿಗುತ್ತಿದೆ. ಕಳೆದ ಬೇಸಿಗೆಯಲ್ಲಿ ಸಮಸ್ಯೆಯಾಗಿರಲಿಲ್ಲ. ವಾರದಲ್ಲಿ ಮೂರು ದಿನವಾದರೂ ನೀರು ಸಿಗುತ್ತಿದೆ ಎನ್ನುವ ಸಮಾಧಾನವಿದೆ’ ಎಂದು ಹೆಸರಘಟ್ಟ ಸಮೀಪದ ಸಿಡೇದಹಳ್ಳಿ ನಿವಾಸಿ ಪಿ.ಆರ್.ಅನನ್ಯ ತಿಳಿಸಿದರು.</p>.<p><strong>ಜಲಜಾಗೃತಿ ನಿರಂತರ</strong>: ಶುದ್ದ ಕಾವೇರಿ ನೀರು ಬಳಕೆಯಿಂದ ಆಗುವ ಲಾಭ, ನೀರಿನ ಸಂಪರ್ಕ ಪಡೆಯುವುದರಿಂದ ಆಗುವ ಆರ್ಥಿಕ ಬದಲಾವಣೆ, ಇಎಂಐ ಸೌಲಭ್ಯ ಇತ್ಯಾದಿಗಳ ಬಗ್ಗೆ 100ಕ್ಕೂ ಹೆಚ್ಚು ಹಳ್ಳಿಗಳಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಿ, ಜನರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ.</p>.<p>ಹೆಚ್ಚಾಗಿ ಸಂಪರ್ಕ ಬಾಕಿ ಇರುವ ಪ್ರದೇಶಗಳನ್ನು ಗುರುತಿಸಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗುತ್ತಿದೆ. ಅಂದ್ರಹಳ್ಳಿ ಭಾಗದಲ್ಲಿ ಸಂಪರ್ಕ ಪ್ರಮಾಣ ಕಡಿಮೆ ಇರುವುದರಿಂದ ಅಲ್ಲಿಯೂ ಕಚೇರಿ ಸ್ಥಾಪಿಸಲಾಗಿದೆ.</p>.<p>‘ಜಲಮಂಡಳಿ ಅಧ್ಯಕ್ಷರು ಬೇಸಿಗೆಯಲ್ಲೇ ಹೆಚ್ಚು ಸಂಪರ್ಕ ನೀಡುವಂತೆ ಸೂಚಿಸಿದ್ದರು. ಆದಷ್ಟು ಬೇಗನೇ ಯೋಜನೆ ಪೂರ್ಣಗೊಳಿಸುವ ಗುರಿ ಇಟ್ಟುಕೊಂಡಿದ್ದರೂ ಜನರ ಮನವೊಲಿಸುವುದು ಕಷ್ಟ. ಉಚಿತ ನೀರಿನ ಸೌಲಭ್ಯ ಪಡೆಯುತ್ತಿರುವವರು, ಮನೆಯಲ್ಲಿ ಬೋರ್ವೆಲ್ ಇದ್ದವರು ಸಂಪರ್ಕ ಪಡೆಯಲು ಒಪ್ಪುತ್ತಿಲ್ಲ’ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.</p>.<p>ಇಲ್ಲಿಯೇ ಹುಟ್ಟಿ ಬೆಳೆದರೂ ಕಾವೇರಿ ನೀರನ್ನು ಈವರೆಗೂ ಕುಡಿದಿರಲಿಲ್ಲ. ಮೂರು ತಿಂಗಳ ಹಿಂದೆ ಸಂಪರ್ಕ ಕೊಟ್ಟು ಶನಿವಾರ ಭಾನುವಾರ ನೀರು ಕೊಡುತ್ತಿದ್ದಾರೆ. ಮೀಟರ್ ಅಳವಡಿಸಿಲ್ಲ. ಜಲಮಂಡಳಿ ಶುಲ್ಕ ಪಾವತಿಸಲು ಸಿದ್ದರಿದ್ದೇವೆ</p><p>--ಅನಿಲ್.ಖಾಸಗಿ ಉದ್ಯೋಗಿ ಅಂದ್ರಹಳ್ಳಿ</p>.<p>ಎರಡು ವರ್ಷದಿಂದ ನಮ್ಮಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿತ್ತು. ಈಗ ಶೇ 80ರಷ್ಟು ಮಂದಿ ಕಾವೇರಿ ಸಂಪರ್ಕ ಪಡೆದಿದ್ದಾರೆ. ಉಳಿದವರಿಗೂ ಸಂಪರ್ಕ ಪಡೆಯುವಂತೆ ಮನವಿ ಮಾಡಲಾಗುತ್ತಿದೆ.</p><p>-ಮಲ್ಲೇಶ ಮುಖಂಡ ಬ್ಯಾಡರಹಳ್ಳಿ</p>.<p>ಯಶವಂತಪುರ ಕ್ಷೇತ್ರ ವ್ಯಾಪ್ತಿಯ 19 ಹಳ್ಳಿಗಳಿಗೆ ಕಾವೇರಿ ನೀರು ಸಂಪರ್ಕ ಕಲ್ಪಿಸಲಾಗಿದ್ದು ಸಂಪರ್ಕ ಪಡೆಯುವವರ ಸಂಖ್ಯೆ ಹೆಚ್ಚಿಸಬೇಕಿದೆ. ಜಲಮಂಡಳಿ ರಿಯಾಯಿತಿ ಯೋಜನೆಗಳನ್ನು ಪ್ರಕಟಿಸಿದ್ದು ನಾವು ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ</p><p>-ಎಸ್.ಟಿ.ಸೋಮಶೇಖರ್ ಶಾಸಕ</p>.<p>ದಾಸರಹಳ್ಳಿ ಕ್ಷೇತ್ರದ ಆರು ಹಳ್ಳಿಗಳಲ್ಲಿ ಸಂಪರ್ಕ ನೀಡಿದ್ದು ಹೆಚ್ಚಿನ ಜನ ಕಾವೇರಿ ನೀರು ಬಳಸುತ್ತಿದ್ದಾರೆ. ನಮಗೆ ಮೂರು ವರ್ಷದ ಹಿಂದೆ ನಿತ್ಯ 100 ದೂರು ನೀರಿಗಾಗಿ ಬರುತ್ತಿದ್ದವು. ಈ ಬೇಸಿಗೆಯಲ್ಲಿ ಅದು ಬಹುತೇಕ ಕಡಿಮೆಯಾಗಿದೆ.</p><p>-ಮುನಿರಾಜು ದಾಸರಹಳ್ಳಿ ಕ್ಷೇತ್ರದ ಶಾಸಕ</p>.<p>110 ಹಳ್ಳಿಗಳಿಗೆ ಕಾವೇರಿ ನೀರಿನ ಸಂಪರ್ಕ ನೀಡುವ ಯೋಜನೆ ಪ್ರಗತಿಯಲ್ಲಿದೆ. ಹೆಚ್ಚಿನ ಜನರಿಗೆ ಕಾವೇರಿ ನೀರು ಸಿಗುತ್ತಿದೆ. ಸಂಪರ್ಕ ಪಡೆಯಲು ಹಿಂದೇಟು ಹಾಕುತ್ತಿರುವವರ ಮನವೊಲಿಸಲು ಮಂಡಳಿ ಹಲವು ಯೋಜನೆಗಳನ್ನು ಪ್ರಕಟಿಸಿದೆ</p><p>-ಡಾ.ರಾಮಪ್ರಸಾತ್ ಮನೋಹರ್ ಅಧ್ಯಕ್ಷ ಜಲಮಂಡಳಿ</p>.<p>ಕೆಲವೆಡೆ ವಿಳಂಬ</p><p>ಮಹದೇವಪುರ ಕ್ಷೇತ್ರದ ಕಾಡುಗೋಡಿ ಬಳಿ ಅರಣ್ಯ ಪ್ರದೇಶದಲ್ಲಿ ಪೈಪ್ಲೈನ್ ಅಳವಡಿಸಬೇಕಾಗಿದ್ದು ಅನುಮತಿ ನೀಡುವುದು ವಿಳಂಬವಾದ ಕಾರಣ 4 ಹಳ್ಳಿಯಲ್ಲಿ ಯೋಜನೆ ಜಾರಿಯಾಗಿಲ್ಲ. ಚೊಕ್ಕನಹಳ್ಳಿ ಭಾಗದಲ್ಲಿ ರೈತರ ಭೂಮಿಯಲ್ಲಿ ಪೈಪ್ಲೈನ್ ಹೋಗಬೇಕಾಗಿದ್ದರಿಂದ ಭೂ ಮಾಲೀಕರೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯವು ಯೋಜನೆಗೆ ಅನುಮತಿ ನೀಡಿದ್ದು ಕಾಮಗಾರಿ ಶುರುವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>