ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ, ‘ಸ್ವಾಮಿನಾಥನ್ ಅವರು ಸಂರಕ್ಷಣೆ ಕೆಲಸಕ್ಕೆ ಸಮರ್ಥರು’ ಎಂದಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಸ್ವಾಮಿನಾಥನ್, ‘ಧನ್ಯವಾದಗಳು ಮೇಡಂ. ಇನ್ಟಕ್ ಸಂಘಟನೆಯ ಮೀರಾ ಅಯ್ಯರ್ ಹಾಗೂ ಪಂಕಜ್ ಮೋದಿ ಈಗಾಗಲೇ ಕೋಟೆ ಶಾಲೆಯಲ್ಲಿ ಕೆಲಸ ಮಾಡಿದ್ದಾರೆ’ ಎಂದು ಹೇಳಿದ್ದಾರೆ.