‘ದೂರುದಾರ ಚಂದ್ರಶೇಖರ್ರ್, 2018ರಲ್ಲಿ ಸ್ನೇಹಿತರ ಜತೆ ಆಂಧ್ರಪ್ರದೇಶದ ಪುಣ್ಯಕ್ಷೇತ್ರವೊಂದಕ್ಕೆ ಹೋಗಿದ್ದರು. ಅಲ್ಲಿ ಅವರಿಗೆ ಆರೋಪಿಗಳ ಪರಿಚಯ ಆಗಿತ್ತು. ತಾಮ್ರದ ಪಾತ್ರೆಯೊಂದನ್ನು ತೋರಿಸಿದ್ದ ಆರೋಪಿಗಳು, ‘ಇದು ಪುರಾತನ ಕಾಲದ ಪಾತ್ರೆ. ಇದನ್ನು ಪೂಜೆ ಮಾಡಿದರೆ ಬೇಗನೇ ಶ್ರೀಮಂತರಾಗಬಹುದು. ಪಾತ್ರೆಯನ್ನು ತಜ್ಞರಲ್ಲಿ ಪರೀಕ್ಷೆ ಮಾಡಿಸಿದ್ದು, ಇದರ ಮೌಲ್ಯ ₹ 200 ಕೋಟಿ ಆಗುತ್ತದೆ ಎಂಬುದು ಗೊತ್ತಾಗಿದೆ. ಯಾರಾದರೂ ಕಡಿಮೆ ಹಣ ಕೊಟ್ಟರೂ ಇದನ್ನು ಮಾರಾಟ ಮಾಡುತ್ತೇವೆ’ ಎಂದಿದ್ದರು. ಪಾತ್ರೆ ನೋಡಿ ಮರಳಿಸಿದ್ದ ಚಂದ್ರಶೇಖರ್ ವಾಪಸು ಊರಿಗೆ ಬಂದಿದ್ದರು.’