<p><strong>ಬೆಂಗಳೂರು</strong>: ನಾಯಂಡಹಳ್ಳಿಯ ಮನೆಯೊಂದರಲ್ಲಿ ಆಟವಾಡುತ್ತಿದ್ದ ಒಂದೂವರೆ ವರ್ಷದ ಮಗು ಸಹನಾ ಮೊದಲ ಮಹಡಿಯಿಂದ ಕೆಳಕ್ಕೆ ಬಿದ್ದು, ಗಾಯಗೊಂಡಿದೆ.</p>.<p>ಘಟನೆ ಏಪ್ರಿಲ್ 6ರಂದು ನಡೆದಿದೆ. ನಾಯಂಡಹಳ್ಳಿಯ ನವೀನ್ ಮತ್ತು ಜಯಶ್ರೀ ದಂಪತಿ ಪುತ್ರಿ ಸಹನಾ ಮಹಡಿಯಿಂದ ಮಗು ಕೆಳಕ್ಕೆ ಬೀಳುತ್ತಿರುವ ದೃಶ್ಯವು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಗುವಿಗೆ ಬಸವನಗುಡಿಯ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.</p>.<p>‘ಮಗುವಿನ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲವೆಂದು ವೈದ್ಯರು ತಿಳಿಸಿದ್ದಾರೆ. ತಲೆಯ ಭಾಗಕ್ಕೆ ಗಾಯವಾಗಿದೆ. ಮೂರು ಹೊಲಿಗೆ ಹಾಕಲಾಗಿದ್ದು, ಸಹನಾ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ’ ಎಂದು ನವೀನ್ ತಿಳಿಸಿದ್ದಾರೆ. </p>.<p>ತಾಯಿ ಜಯಶ್ರೀ ಅವರು ಹಾಲು ಕುದಿಸಲು ಇಟ್ಟಿದ್ದರು. ಅದನ್ನು ನೋಡಲು ಅಡುಗೆ ಮನೆಗೆ ತೆರಳಿದ್ದರು. ಆಟವಾಡುತ್ತಿದ್ದ ಮಗು ಮಹಡಿಯಿಂದ ಬಿದ್ದು ಗಾಯಗೊಂಡಿತ್ತು. ಹೊರಕ್ಕೆ ಬಂದು ಮಗು ಬಿದ್ದಿರುವುದನ್ನು ನೋಡಿದ್ದ ತಾಯಿಯೂ ಅಸ್ವಸ್ಥಗೊಂಡಿದ್ದರು.</p>.<p>ಶಾಸಕ ಪ್ರಿಯಕೃಷ್ಣ ಅವರ ಪರವಾಗಿ ಪ್ರದೀಪ್ ಕೃಷ್ಣಪ್ಪ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಗುವಿನ ಚಿಕಿತ್ಸೆಗೆ ₹2 ಲಕ್ಷ ನೆರವು ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ನಾಯಂಡಹಳ್ಳಿಯ ಮನೆಯೊಂದರಲ್ಲಿ ಆಟವಾಡುತ್ತಿದ್ದ ಒಂದೂವರೆ ವರ್ಷದ ಮಗು ಸಹನಾ ಮೊದಲ ಮಹಡಿಯಿಂದ ಕೆಳಕ್ಕೆ ಬಿದ್ದು, ಗಾಯಗೊಂಡಿದೆ.</p>.<p>ಘಟನೆ ಏಪ್ರಿಲ್ 6ರಂದು ನಡೆದಿದೆ. ನಾಯಂಡಹಳ್ಳಿಯ ನವೀನ್ ಮತ್ತು ಜಯಶ್ರೀ ದಂಪತಿ ಪುತ್ರಿ ಸಹನಾ ಮಹಡಿಯಿಂದ ಮಗು ಕೆಳಕ್ಕೆ ಬೀಳುತ್ತಿರುವ ದೃಶ್ಯವು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಗುವಿಗೆ ಬಸವನಗುಡಿಯ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.</p>.<p>‘ಮಗುವಿನ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲವೆಂದು ವೈದ್ಯರು ತಿಳಿಸಿದ್ದಾರೆ. ತಲೆಯ ಭಾಗಕ್ಕೆ ಗಾಯವಾಗಿದೆ. ಮೂರು ಹೊಲಿಗೆ ಹಾಕಲಾಗಿದ್ದು, ಸಹನಾ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ’ ಎಂದು ನವೀನ್ ತಿಳಿಸಿದ್ದಾರೆ. </p>.<p>ತಾಯಿ ಜಯಶ್ರೀ ಅವರು ಹಾಲು ಕುದಿಸಲು ಇಟ್ಟಿದ್ದರು. ಅದನ್ನು ನೋಡಲು ಅಡುಗೆ ಮನೆಗೆ ತೆರಳಿದ್ದರು. ಆಟವಾಡುತ್ತಿದ್ದ ಮಗು ಮಹಡಿಯಿಂದ ಬಿದ್ದು ಗಾಯಗೊಂಡಿತ್ತು. ಹೊರಕ್ಕೆ ಬಂದು ಮಗು ಬಿದ್ದಿರುವುದನ್ನು ನೋಡಿದ್ದ ತಾಯಿಯೂ ಅಸ್ವಸ್ಥಗೊಂಡಿದ್ದರು.</p>.<p>ಶಾಸಕ ಪ್ರಿಯಕೃಷ್ಣ ಅವರ ಪರವಾಗಿ ಪ್ರದೀಪ್ ಕೃಷ್ಣಪ್ಪ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಗುವಿನ ಚಿಕಿತ್ಸೆಗೆ ₹2 ಲಕ್ಷ ನೆರವು ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>