‘ಗೃಹಿಣಿ ಆಗಿದ್ದ ಉಷಾಕುಮಾರಿ, ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಆಕೆಗೆ ಚಿಕಿತ್ಸೆ ಕೊಡಿಸಲು ರೂಪೇಶ್, ಕೈ ಸಾಲ ಮಾಡಿದ್ದರು.ಸಾಲ ವಾಪಸ್ ನೀಡುವಂತೆ ಸಾಲಗಾರರು, ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದರು. ಸಾಲಗಾರರ ಕಿರುಕುಳ ಹೆಚ್ಚಾಗುತ್ತಿದ್ದಂತೆ ಉಷಾಕುಮಾರಿ ಹಾಗೂ ರೂಪೇಶ್ ನಡುವೆ ಜಗಳ ಶುರುವಾಗಿ ವೈ ಮನಸ್ಸು ಮೂಡಿತ್ತು. ಗುರುವಾರವೂ ದಂಪತಿ ಜಗಳವಾಡಿದ್ದರು. ಬೇಸತ್ತ ರೂಪೇಶ್, ಮನೆಯಿಂದ ಹೊರಗಡೆ ಹೋಗಿದ್ದರು’ ಎಂದರು.