ಅನ್ನಸಂದ್ರಪಾಳ್ಯ ನಿವಾಸಿ ಗಿರಿಜಮ್ಮ ಎಂಬುವವರು ನೀಡಿದ ದೂರಿನ ಮೇರೆಗೆ ಅವರ ಸಹೋದರಿಯ ಮಕ್ಕಳಾದ ಸಿನಿಮಾ ನಿರ್ದೇಶಕ ಪ್ರಶಾಂತ್ ರಾಜ್, ನಿರ್ಮಾಪಕ ನವೀನ್ರಾಜ್, ಮತ್ತೊಬ್ಬ ಆರೋಪಿ ನಾಗರಾಜ್ ಎಂಬುವವರ ವಿರುದ್ಧ ಸುಲಿಗೆ ಹಾಗೂ ಪ್ರಾಣ ಬೆದರಿಕೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು. ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಅನ್ನಸಂದ್ರಪಾಳ್ಯದ ಅಭಿಲಾಷ್ ಹಾಗೂ ಮತ್ತೊಬ್ಬ ಆರೋಪಿ, ಉದ್ಯಮಿಯೊಬ್ಬರಿಂದ ಹಣ ಸುಲಿಗೆ ಮಾಡಿದ್ದರು. ಬಿಇ ಪದವೀಧರ ಅಭಿಲಾಷ್ ಸುಲಭವಾಗಿ ಹಣ ಮಾಡಲು ಈ ಕೃತ್ಯಕ್ಕೆ ಮುಂದಾಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಅಭಿಲಾಷ್ ಇದೀಗ ವಂಚನೆ ಆರೋಪ ಎದುರಿಸುತ್ತಿರುವ ನಿರ್ದೇಶಕ ಪ್ರಶಾಂತ್ ರಾಜ್ ಅವರ ದೊಡ್ಡಮ್ಮನ ಪುತ್ರ.