‘ಆಗ ಆರೋಪಿ, ‘ಸಂಘದ ಅಧ್ಯಕ್ಷರಾಗಿದ್ದ ಪುಟ್ಟಣ್ಣಯ್ಯ ತೀರಿಕೊಂಡ ಮೇಲೆ ನಾನೇ ಎಲ್ಲ. ಹಲವು ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿಸಿದ್ದೇನೆ. ನಾನು ಹೇಳಿದಂತೆ ಕೇಳದಿದ್ದರೆ, ನಿನಗೂ ಒಂದು ಗತಿ ಕಾಣಿಸುತ್ತೇನೆ’ ಎಂದು ಬೆದರಿಕೆವೊಡ್ಡಿದ್ದ. ಸ್ಥಳದಲ್ಲಿದ್ದ ಸಿಬ್ಬಂದಿ, ಆರೋಪಿಗೆ ಬುದ್ದಿವಾದ ಹೇಳಿದ್ದರು. ಅವರ ಮಾತಿಗೆ ಬೆಲೆ ಕೊಡದ ಆರೋಪಿ, ನನ್ನ ಕೈ ಹಿಡಿದು ಎಳೆದು ಕುರ್ಚಿಯಿಂದ ಬೀಳಿಸಿದ್ದ. ಟೇಬಲ್ ಮೇಲಿದ್ದ ಪ್ರಕರಣದ ಕಡತವನ್ನು ಹರಿದುಹಾಕಿ ಸ್ಥಳದಿಂದ ಹೊರಟು ಹೋದ’ ಎಂದು ವೆಂಕಟೇಶ್ ದೂರಿನಲ್ಲಿ ಹೇಳಿದ್ದಾರೆ.