ಸ್ಥಳೀಯರ ದೂರಿನ ಮೇಲೆ ಕಂದಾಯ ಇಲಾಖೆ ಅಧಿಕಾರಿಗಳ ತಂಡವು ಪೊಲೀಸರ ಭದ್ರತೆಯೊಂದಿಗೆ ಬುಧವಾರ ಕಾರ್ಯಾಚರಣೆ ನಡೆಸಿತು. ಬೆಂಗಳೂರು ಉತ್ತರ ತಾಲ್ಲೂಕು ಹೆಚ್ಚುವರಿ ತಹಶೀಲ್ದಾರ್ ಬಿ.ಆರ್.ಮಂಜುನಾಥ್ ಪ್ರತಿಕ್ರಿಯಿಸಿ, ‘ಕೋಗಿಲು ಗ್ರಾಮದ ಸರ್ವೇ ನಂ. 99ರಲ್ಲಿ 2 ಎಕರೆ ಸರ್ಕಾರಿ ಗೋಮಾಳ ಜಾಗದಲ್ಲಿ ಅರ್ಧಭಾಗದಷ್ಟು ನಿರ್ಮಿಸಿದ್ದ 7 ಕಟ್ಟಡಗಳೂ ಸೇರಿದಂತೆ 50 ಮನೆಗಳನ್ನು ನಿರ್ಮಿಸಲು ಅಳವಡಿಸಿದ್ದ ಪಾಯಗಳನ್ನು ತೆರವುಗೊಳಿಸಲಾಗಿದೆ. ಅಲ್ಲದೆ 4 ವಾಸದ ಮನೆಗಳಿದ್ದು, ಕುಟುಂಬ ಸದಸ್ಯರಿಗೆ ನೋಟಿಸ್ ಜಾರಿ ಮಾಡಿ ತೆರವಿಗೆ ಒಂದು ವಾರ ಗಡುವು ನೀಡಲಾಗಿದೆ’ ಎಂದು ತಿಳಿಸಿದರು.