ಬೆಂಗಳೂರು: ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಇದೇ 9ರಿಂದ 13ರವರೆಗೆ ₹2.69 ಕೋಟಿ ನೆರವು ಹರಿದು ಬಂದಿದೆ.
ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದವರಿಗೆ ನೆರವು ನೀಡಲು ದಾನಿಗಳು ಮುಂದೆ ಬಂದಿದ್ದು, ಆಗಸ್ಟ್ 13ರಂದು ಒಂದೇ ದಿನ 28 ಡಿ.ಡಿ.ಗಳು ತಲುಪಿದ್ದು, ಒಟ್ಟು ಮೊತ್ತ ₹1.83 ಕೋಟಿಗಳಷ್ಟಾಗಿದೆ. ಇದಲ್ಲದೆ, ಚೆಕ್ ಮೂಲ ಸುಮಾರು ₹86 ಲಕ್ಷ ಬಂದಿದೆ.
ಸಿ.ಎಂ ಪರಿಹಾರ ನಿಧಿಖಾತೆಗೆ ಆನ್ಲೈನ್ ಅಥವಾ ಚೆಕ್–ಡಿ.ಡಿ.ಗಳ ಮೂಲಕ ಹಣ ಪಾವತಿಸ ಬಹುದು ಎಂದು ಮುಖ್ಯಮಂತ್ರಿ ಸಚಿವಾಲಯ ತಿಳಿಸಿದೆ.
ಖಾತೆ ಹೆಸರು: chief minister relief fund natural calamity.ಖಾತೆ ಸಂಖ್ಯೆ–378870 98605, ಎಸ್ಬಿಐ ವಿಧಾನಸೌಧ ಶಾಖೆ, ಐಎಫ್ಸಿಸಿ ಕೋಡ್–ಎಸ್ಬಿಐ 0040277, ಎಂಐಸಿಆರ್ ಸಂಖ್ಯೆ–560002419