</p><p>ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಭಿರಾಂ ಜಿ.ಶಂಕರ ಮಾತನಾಡಿ, ಮತದಾರರ ಜಾಗೃತಿ ಕೆಲಸದಲ್ಲಿ ಪತ್ರಕರ್ತರು ಜಿಲ್ಲಾಡಳಿತದೊಂದಿಗೆ ಸೇರಿರುವುದು ಒಳ್ಳೆಯ ಬೆಳವಣಿಗೆ ಎಂದರು.</p><p>ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿಶೋರಬಾಬು ಮಾತನಾಡಿ, ‘2013 ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಶೇ 67ರಷ್ಟು ಮತದಾನವಾಗಿತ್ತು. ಮಾಧ್ಯಮವು ಜನರ ಮೇಲೆ ತುಂಬಾ ಪ್ರಭಾವ ಬೀರುತ್ತದೆ. ಹೀಗಾಗಿ ಕಿರುಚಿತ್ರ ಸೇರಿದಂತೆ ವಿವಿಧ ಮಾಧ್ಯಮಗಳಿಂದ ಮತದಾರರನ್ನು ಜಾಗೃತಿಗೊಳಿಸಿ, ಈ ಬಾರಿ ಹೆಚ್ಚಿನ ಪ್ರಮಾಣದ ಮತದಾನ ಸಾಧ್ಯವಾಗುವಂತೆ ಮಾಡೋಣ’ ಎಂದು ತಿಳಿಸಿದರು.</p><p>ಹಿರಿಯ ಪತ್ರಕರ್ತರಾದ ಅರವಿಂದ ಕುಲಕರ್ಣಿ, ಬಿ.ವೆಂಕಟಸಿಂಗ್ ವೇದಿಕೆಯಲ್ಲಿದ್ದರು.</p><p>ಕಿರುಚಿತ್ರ ಕಥೆ, ಸಂಕಲನ ಹಾಗೂ ನಿರ್ದೇಶನವನ್ನು ಪತ್ರಕರ್ತ ವಿಜಯ ಜಾಗಟಗಲ್ ಮಾಡಿದ್ದಾರೆ. ಪತ್ರಕರ್ತರಾದ ಸಿದ್ದಯ್ಯಸ್ವಾಮಿ ಕುಕನೂರು, ರಾಮಕೃಷ್ಣ ದಾಸರಿ ಹಾಗೂ ಕಲಾವಿದರಾದ ಹನುಮೇಶ ಕರಣಗಿ, ಮಲ್ಲಿಕಾರ್ಜುನ, ವೆಂಕಟೇಶ ನಟನೆ ಮಾಡಿದ್ದಾರೆ. ಸಂತೋಷಕುಮಾರ್, ಸತೀಶಕುಮಾರ್ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರವು 9 ನಿಮಿಷ 42 ಸೆಕೆಂಡ್ ಅವಧಿ ಇದೆ. <a href="https://youtu.be/CoeeaYN3YvE" target="_blank">https://youtu.be/CoeeaYN3YvE</a> ಜಾಲತಾಣದಲ್ಲಿ ಕಿರುಚಿತ್ರ ವೀಕ್ಷಿಸಬಹುದು.</p><p>ವಿಜಯ ಜಾಗಟಗಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದಯ್ಯಸ್ವಾಮಿ ಕುಕನೂರು ಸ್ವಾಗತಿಸಿದರು. ವೆಂಕಟೇಶ ಹೂಗಾರ್ ಕಾರ್ಯಕ್ರಮ ನಿರೂಪಿಸಿದರು.</p></p>