‘ಆದೇಶದಲ್ಲಿನ ತಪ್ಪು ಹಾಗೆಯೇ ಉಳಿಯುತ್ತಿದ್ದರೆ ಹಲವಾರು ಉಪನ್ಯಾಸಕರಿಗೆ ಅನ್ಯಾಯವಾಗುತ್ತಿತ್ತು. ಆದೇಶ ರಾಜ್ಯಪತ್ರದಲ್ಲಿ ಸೇರಿದ್ದೇ ಆಗಿದ್ದರೆ ಅದನ್ನು ತಿದ್ದುಪಡಿ ಮಾಡಲು ಉಪನ್ಯಾಸಕರು ಹಲವು ತಿಂಗಳು ಅಲೆದಾಟ ನಡೆಸಬೇಕಾಗುತ್ತಿತ್ತು. ಈ ಬಗ್ಗೆ ಸಕಾಲದಲ್ಲಿವರದಿ ಪ್ರಕಟವಾದ ಕಾರಣ ಅನ್ಯಾಯವನ್ನು ಬಹುಬೇಗನೆ ಸರಿಪಡಿಸುವುದು ಸಾಧ್ಯವಾಯಿತು’ ಎಂದು ಹಲವು ಉಪನ್ಯಾಸಕರು ಪ್ರತಿಕ್ರಿಯಿಸಿದರು.