ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಿಷನರ್ ನೇರಪ್ರಸಾರ ಏ. 17ರಂದು

Last Updated 15 ಏಪ್ರಿಲ್ 2021, 14:22 IST
ಅಕ್ಷರ ಗಾತ್ರ

ಬೆಂಗಳೂರು: ‘ಬ್ಯಾಟ್‌ ಹಿಡಿದ ಇಂದಿರಾನಗರ ಗೂಂಡಾ’ ವಿರುದ್ಧ ದೂರು ನೀಡಲು ನೀವೆಲ್ಲ ಸಿದ್ಧರಾಗಿದ್ದೀರಾ? ಹೀಗೆಂದು ಕೇಳುತ್ತಿರುವುದು ಬೆಂಗಳೂರು ನಗರ ಪೊಲೀಸರು.

ಕಮಿಷನರ್ ಕಮಲ್ ಪಂತ್ ಅವರು ಏಪ್ರಿಲ್ 17ರಂದು ಬೆಳಿಗ್ಗೆ 11ರಿಂದ 12 ಗಂಟೆವರೆಗೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ‘ಬೆಂಗಳೂರು ಸಿಟಿ ಪೊಲೀಸ್’ ಖಾತೆಯಲ್ಲಿ ನೇರಪ್ರಸಾರದಲ್ಲಿ ಮಾತನಾಡಲಿದ್ದಾರೆ. ಕಾರ್ಯಕ್ರಮದ ಪ್ರಚಾರಕ್ಕಾಗಿ ಪೊಲೀಸರು, ಇತ್ತೀಚೆಗೆ ಹೆಚ್ಚು ಸುದ್ದಿಯಾದ ರಾಹುಲ್ ದ್ರಾವಿಡ್‌ ಕಾಣಿಸಿಕೊಂಡಿದ್ದ ಜಾಹೀರಾತು ಬಳಸಿಕೊಳ್ಳುತ್ತಿದ್ದಾರೆ.

ಬ್ಯಾಟ್ ಹಿಡಿದಿರುವ ರಾಹುಲ್ ದ್ರಾವಿಡ್ ಫೋಟೊ ಸಮೇತ ಟ್ವಿಟರ್ ಹಾಗೂ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿರುವ ಪೊಲೀಸರು, ‘ಸುತ್ತಮುತ್ತಲು ನಡೆಯುವ ಕೃತ್ಯಗಳ ಬಗ್ಗೆ ಹಾಗೂ ಪೊಲೀಸ್ ವ್ಯವಸ್ಥೆ ಬಗ್ಗೆ ಏನಾದರೂ ಸಮಸ್ಯೆಗಳು ಇದ್ದರೆ ಕಮಿಷನರ್ ಜೊತೆ ಮಾತನಾಡಬಹುದು. ನಿಮ್ಮ ಪ್ರಶ್ನೆಗಳಿಗೆ ಕಮಿಷನರ್ ಉತ್ತರಿಸಲಿದ್ದಾರೆ’ ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT