‘ಹಿಂದೆ ಪಕ್ಷಿಗಳು ಕೀಟಗಳನ್ನು ತಿನ್ನುತ್ತಿದ್ದವು. ಕೊಟ್ಟಿಗೆ ಗೊಬ್ಬರ ಬಳಕೆ, ಬೂದಿ ಎರಚುವ ಪದ್ಧತಿಗ
ಳನ್ನು ಕೃಷಿಯಲ್ಲಿ ಅನುಸರಿಸಲಾಗುತ್ತಿತ್ತು. ಆದರೆ, ಇಂದು ಕೇವಲ ಕೀಟನಾಶಕಗಳಿಗಷ್ಟೇ ಸೀಮಿತರಾಗಿದ್ದೇವೆ. ಇದರ ಪರಿಣಾಮ ಇಂತಹ ಸಮಸ್ಯೆಗಳು ಎದುರಾಗುತ್ತಿವೆ. ಹಳೆಯ ಪದ್ಧತಿಗಳ ಜೊತೆಗೆ ಕೀಟನಾಶಕಗಳನ್ನು ಅಗತ್ಯಕ್ಕೆ ತಕ್ಕಂತೆ ಬಳಸುವುದರಿಂದ ಮಣ್ಣಿನ ಆರೋಗ್ಯ ಫಲವತ್ತಾಗಿರುವುದರ ಜೊತೆಗೆ ಔಷಧಿಗಳಿಗೆ ತಗಲುವ ವೆಚ್ಚವೂ ಕಡಿಮೆಯಾಗಿ ಮನುಷ್ಯನ ಆರೋಗ್ಯ ಉತ್ತಮವಾಗಲಿದೆ’ ಎಂದು ತಿಳಿಸಿದರು.ಕೃಷಿ ವಿಶ್ವವಿದ್ಯಾಲಯದ ಮಣ್ಣು ವಿಜ್ಞಾನಿ ಡಾ.ಜಿ.ಜಿ.ಕಾದಳ್ಳಿ, ಮಣ್ಣಿನ ಗುಣ-ವಿಶೇಷತೆಗಳು, ಮಹತ್ವ ಮತ್ತು ಸಂರಕ್ಷಣೆ ಕುರಿತು ಮಾಹಿತಿ ನೀಡಿದರು.