ಈ ಕುರಿತು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಉಪಮೇಯರ್ ಭದ್ರೇಗೌಡ, 'ಹಾಗೇನೂ ಇಲ್ಲ. ಕೆಲವು ಕಾಮಗಾರಿ ವೀಕ್ಷಣೆಗೆ ತೆರಳುವಾಗ ಮೇಯರ್ ಜೊತೆಗೆ ನಾನು ಹೋಗಿಲ್ಲ ನಿಜ. ಸಂವಹನದ ಕೊರತೆಯಿಂದ ಈ ರೀತಿ ಆಗಿದೆ. ಮೈತ್ರಿಕೂಟದ ಎರಡೂ ಪಕ್ಷಗಳ ನಡುವೆ ಏನೇ ಅಸಮಾಧಾನಗಳಿದ್ದರೆ ಚರ್ಚಿಸಿ ಬಗೆಹರಿಸಿಕೊಳ್ಳುತ್ತೇವೆ' ಎಂದರು.