ವಿಧಾನಸಭಾಧ್ಯಕ್ಷರಾಗಿ ಈಹಿಂದೆ ಕೆಲಸ ಮಾಡಿದ ಎಂ.ವಿ. ವೆಂಕಟಪ್ಪ, ಕೆ.ಆರ್. ರಮೇಶ್ ಕುಮಾರ್, ಕೃಷ್ಣ, ಜಗದೀಶ ಶೆಟ್ಟರ್, ಕೆ.ಜಿ.ಬೋಪಯ್ಯ, ಕಾಗೋಡು ತಿಮ್ಮಪ್ಪ, ಕೆ.ಬಿ. ಕೋಳಿವಾಡ ಅವರ ಅಧ್ಯಕ್ಷತೆಯಲ್ಲಿ ಬಾಲಬ್ರೂಯಿ ಅತಿಥಿ ಗೃಹದಲ್ಲಿ ಕ್ಲಬ್ ಸ್ಥಾಪಿಸುವ ಕುರಿತಂತೆ ಸಾಕಷ್ಟು ಸಭೆಗಳು ನಡೆದಿದ್ದವು. ಅದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಅದನ್ನು ಕೈಬಿಟ್ಟು ಕಾರ್ಲ್ಟನ್ ಭವನದಲ್ಲಿ ಕ್ಲಬ್ ಸ್ಥಾಪಿಸಲು ನಿರ್ಧರಿಸಲಾಗಿತ್ತು. ಆದರೆ, ನಂತರ ಈ ಯೋಜನೆ ನನೆಗುದಿಗೆ ಬಿದ್ದಿತ್ತು.