ಇದಕ್ಕೆ ಪ್ರತಿವಾದ ಮಂಡಿಸಿದ್ದ ನಿಗಮದ ಪರ ವಕೀಲರು, ‘ಹುಣ್ಣಿಮೆ ಸಮಯದಲ್ಲಿ ಜನಸಂದಣಿ ನಿಯಂತ್ರಿಸಲು ಸ್ಥಳೀಯ ಪೊಲೀಸರು ಬಸ್ ನಿಲ್ದಾಣವನ್ನು ತಾತ್ಕಾಲಿಕವಾಗಿ ಹೊರವಲಯಕ್ಕೆ ಸ್ಥಳಾಂತರಿಸಿದ್ದರು. ಈ ಬಗ್ಗೆ ಬಸ್ ಕಂಡಕ್ಟರ್ ದೂರುದಾರರಿಗೆ ಎಸ್ಎಂಎಸ್ ಕಳುಹಿಸಿದ್ದಾರೆ. ಉಳಿದ 23 ಪ್ರಯಾಣಿಕರೆಲ್ಲಾ ಬಸ್ಗೆ ಹತ್ತಿದ್ದರೂ, ದೂರುದಾರರು ಬಂದಿರಲಿಲ್ಲ. ಇದು ಅವರದೇ ತಪ್ಪು’ ಎಂದು ವಾದಿಸಿದ್ದರು.