ಇದರ ವಿರುದ್ಧ ಕಾಂತರಾಜ್ ಆಯೋಗಕ್ಕೆ 2019ರ ಡಿಸೆಂಬರ್ 21ರಂದು ದೂರು ನೀಡಿದ್ದರು. ವಿಚಾರಣೆ ನಡೆಸಿದ ಆಯೋಗವು ಗ್ರಾಹಕರ ರಕ್ಷಣಾ ಕಾಯ್ದೆ–1986ರ ಕಲಂ 12ರ ಅನುಸಾರ; ದೂರುದಾರರಿಗೆ ₹ 16, ಕೈಚೀಲ ನೀಡಲು ನಿರಾಕರಿಸಿದ್ದಕ್ಕೆ ₹ 5 ಸಾವಿರ, ಗ್ರಾಹಕರಿಗೆ ನೀಡಲಾಗುವ ಸೇವೆಯಲ್ಲಿ ಉಂಟಾದ ವ್ಯತ್ಯಯಕ್ಕೆ ₹ 3 ಸಾವಿರ, ದೂರುದಾರರಿಗೆ ಆಗಿರುವ ಮಾನಸಿಕ ನೋವು ಮತ್ತು ದಾವೆಗೆ ತಗುಲಿದ ವೆಚ್ಚಕ್ಕೆ ₹ 2 ಸಾವಿರ ಹಾಗೂ ಗ್ರಾಹಕ ಕಾನೂನು ಸೇವೆಗಳ ನೆರವಿಗೆ ₹ 5 ಸಾವಿರ ಸೇರಿ ಒಟ್ಟು 15,061 ಮೊತ್ತದ ಪರಿಹಾರ ನೀಡುವಂತೆ ಪ್ರತಿವಾದಿಗಳಿಗೆ ಆದೇಶಿಸಿದೆ.