‘ಕೆರೆ ಅಭಿವೃದ್ಧಿ ಅಥವಾ ಅದರ ನಿರ್ವಹಣೆ ಒಬ್ಬರ ಬಳಿ ಇಲ್ಲ. ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಆ್ಯಂಡ್ ಸೆಂಟರ್ (ಎಂಇಜಿ), ಬಿಬಿಎಂಪಿ, ಜಲಮಂಡಳಿ ಎಂದೆಲ್ಲ ಒಬ್ಬೊಬ್ಬರು ಒಂದು ರೀತಿಯ ಕೆಲಸ ಮಾಡುತ್ತಿದ್ದಾರೆ. ನಿರ್ವಹಣೆಯಂತೂ ಹೇಳತೀರದಂತಾ
ಗಿದೆ. ಕೆರೆಯಲ್ಲಿರುವ ಪ್ಲಾಸ್ಟಿಕ್ ಅನ್ನು ತೆಗೆದು ಏರಿ ಮೇಲೆ ಹಾಕುತ್ತಾರೆ. ಅದನ್ನು ಅಲ್ಲಿಂದ ತೆಗೆದುಕೊಂಡು ಹೋಗುವ ವೇಳೆಗೆ ಅರ್ಧದಷ್ಟು ಮತ್ತೆ ಕೆರೆಗೇಬೀಳುತ್ತಿದೆ’ ಎಂದು ಹಲಸೂರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಮೋಹನ್ ರಾಜ್ ಆರೋಪಿಸಿದರು.