ಬೆಂಗಳೂರು: ನಗರದ ಜಲ್ ವಾಯು ಟವರ್ಸ್ ಅಪಾರ್ಟ್ಮೆಂಟ್ ಓನರ್ಸ್ ಅಸೋಸಿಯೇಷನ್ (ಜೆವಿಟಿಎಒಎ) ವತಿಯಿಂದ ಕೊರೊನಾ ಯೋಧರನ್ನು ಸನ್ಮಾನಿಸಲಾಯಿತು.
ನಿವೃತ್ತ ಬ್ರಿಗೇಡಿಯರ್ ಸತ್ಯೇಂದ್ರಕುಮಾರ್ ನೇತೃತ್ವದ ಸಂಘದ ವ್ಯವಸ್ಥಾಪಕರ ಮಂಡಳಿ (ಬಿಒಎಂ)ಯ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಅಪಾರ್ಟ್ಮೆಂಟ್ ಸಮುಚ್ಛಯವನ್ನು ಕೋವಿಡ್ ಮುಕ್ತ ಆಗಿಸುವಲ್ಲಿ ಶ್ರಮಿಸಿದ ಆರೋಗ್ಯ ಕಾರ್ಯಕರ್ತರು, ಮನೆಕೆಲಸಗಾರರು, ಪೌರಕಾರ್ಮಿಕರನ್ನು, ಅಪಾರ್ಟ್ಮೆಂಟ್ನ ಭದ್ರತಾ ಸಿಬ್ಬಂದಿಯನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಲ್ಲದೆ, ಪ್ರಶಂಸಾ ಪದಕಗಳನ್ನು ನೀಡಿ ಗೌರವಿಸಲಾಯಿತು.