ತುರ್ತು ಸೇವಾ ಸಿಬ್ಬಂದಿ, ಔಷಧ, ತರಕಾರಿ, ಆಹಾರ ಪದಾರ್ಥಗಳ ವಿತರಕರು ಹಾಗೂ ಮಾಧ್ಯಮದವರನ್ನು ಅಗತ್ಯ ಸೇವೆಗಳ ವ್ಯಾಪ್ತಿಗೆ ಸೇರಿಸಲಾಗಿದೆ. ಇವರೆಲ್ಲರಿಗೂ ಪಾಸ್ ನೀಡಲು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ತೀರ್ಮಾನ ಕೈಗೊಂಡಿದ್ದರು. ಅದರಂತೆ ನಗರದ ಎಲ್ಲ ಡಿಸಿಪಿ ಕಚೇರಿಯಲ್ಲಿ ಪಾಸ್ ವಿತರಣೆ ಪ್ರಕ್ರಿಯೆ ಶುರುವಾಗಿತ್ತು.