ಬೆಂಗಳೂರು: ರಾಜ್ಯದಲ್ಲಿ ‘ಕೋವಿಡ್–19’ ಸೋಂಕು ಪ್ರಕರಣಗಳು ಕಂಡುಬರುತ್ತಿರುವುದರಿಂದ ಪೊಲೀಸ್ ಠಾಣೆಗಳಲ್ಲೂ ಆತಂಕ ಶುರುವಾಗಿದೆ. ನಗರದ ಠಾಣೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಠಾಣೆಗೆ ಬರುವವರನ್ನು ಸೋಂಕು ನಿವಾರಕ ದ್ರಾವಣದಿಂದ (ಸ್ಯಾನಿಟೈಸರ್) ಕೈ ತೊಳೆದು ಒಳಗೆ ಬರುವಂತೆ ಸೂಚಿಸಲಾಗುಗುತ್ತಿದೆ.