ರಾಜಾಜಿನಗರ ಕಟ್ಟಡವೊಂದರ ನವೀಕರಣಕ್ಕೆ ₹ 3 ಕೋಟಿ ಮೌಲ್ಯದ ಗುತ್ತಿಗೆ ಧನಂಜಯ್ ಅವರಿಗೆ ಮಂಜೂರಾಗಿತ್ತು. ಆದರೆ, ಗುತ್ತಿಗೆ ಹಣವನ್ನು ಬಿಡುಗಡೆ ಮಾಡಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದರು. ಕೃಷ್ಣಮೂರ್ತಿ ಗುತ್ತಿಗೆ ಹಣ ಬಿಡುಗಡೆ ಮಾಡಿಸಲು ₹ 23 ಲಕ್ಷ ಲಂಚ ಕೇಳಿದ್ದರು. ಬಸವೇಶ್ವರ ನಗರದಲ್ಲಿರುವ ತಮ್ಮ ಮನೆಯಲ್ಲಿ ಗುತ್ತಿಗೆದಾರರಿಂದ ಮೊದಲ ಕಂತು ₹ 15 ಲಕ್ಷ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದರು. ಈ ಸಂದರ್ಭದಲ್ಲಿ ಆರೋಪಿ ಎಂಜಿನಿಯರ್ಗಳು ಹಾಜರಿದ್ದರು.