ಕೀ ಕಿತ್ತುಕೊಂಡು ದೌರ್ಜನ್ಯ: ‘ತಾಯಿ ಮಂಗಳ (47), ಮಧುಮೇಹ ಹಾಗೂ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ ಚಿಕಿತ್ಸೆ ಕೊಡಿಸಲೆಂದು ತಂದೆ ಮಲ್ಲೇಶ್ (50) ದ್ವಿಚಕ್ರ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಸಂಗಂ ವೃತ್ತದ ಬಳಿ ವಾಹನ ಅಡ್ಡಗಟ್ಟಿದ್ದ ಪೊಲೀಸರು, ಕೀ ಕಿತ್ತುಕೊಂಡಿದ್ದರು. ₹ 5,000 ಬಾಕಿ ದಂಡ ಪಾವತಿಸುವಂತೆ ಒತ್ತಾಯಿಸಿದ್ದರು’ ಎಂದು ರಾಕೇಶ್ ಹೇಳಿದ್ದಾರೆ.