2015ರ ಡಿಸೆಂಬರ್ 4ರಂದು ರಾತ್ರಿ ಸ್ನೇಹಿತರ ಜೊತೆಯಲ್ಲಿ ಅವಿನಾಶ್, ಕತ್ರಿಗುಪ್ಪೆಯಲ್ಲಿರುವ ‘ಬರ್ಟನ್’ ಬಾರ್ಗೆ ಹೋಗಿದ್ದರು. ಅದೇ ಬಾರ್ಗೆ ಬಂದಿದ್ದ ಸುರೇಶ್, ಅವಿನಾಶ್ ಜೊತೆ ಜಗಳ ಮಾಡಿದ್ದ. ಸ್ಥಳೀಯರು ಜಗಳ ಬಿಡಿಸಿ ಕಳುಹಿಸಿದ್ದರು. ಅದಾಗಿ ಕೆಲ ಗಂಟೆಗಳ ಬಳಿಕ ತಮ್ಮ ದ್ವಿಚಕ್ರ ವಾಹನ ನಿಲ್ಲಿಸಿದ್ದ ಸ್ಥಳಕ್ಕೆ ಅವಿನಾಶ್ ಹೋಗಿದ್ದರು. ಅಲ್ಲಿಯೇ ಇದ್ದ ಅಪರಾಧಿ ಸುರೇಶ್ ಪುನಃ ಜಗಳ ತೆಗೆದು ಹಲ್ಲೆ ಮಾಡಿದ್ದ.