ಬೆಂಗಳೂರು: ಕೋವಿಡ್–19 ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವವರಿಗೆ ನೆರವಾಗುವ ಸಲುವಾಗಿ ಅಕ್ಷಯಪಾತ್ರೆ ಪ್ರತಿಷ್ಠಾನದ ಜೊತೆಗೆ ಬಹುರಾಷ್ಟ್ರೀಯ ಔಷಧ ಕಂಪೆನಿ ಹಿಮಾಲಯ ಕೈಜೋಡಿಸಿದೆ. ನಿರ್ಗತಿಕರಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡುವ ಸಲುವಾಗಿ 2016ರಿಂದ ಇಲ್ಲಿಯವರೆಗೆ ಸುಮಾರು 4 ಕೋಟಿ ರೂಪಾಯಿಗಳ ಕೊಡುಗೆ ನೀಡಿರುವ ಕಂಪನಿಯು, ಇದೀಗ ಸುಮಾರು 7,146 ಹ್ಯಾಪಿನೆಸ್ ಕಿಟ್ಗಳ ಪ್ರಾಯೋಜಕತ್ವ ವಹಿಸಿದೆ. ಇದರಿಂದ ಸುಮಾರು 36,300 ಮಕ್ಕಳಿಗೆ ನೆರವಾಗಿದೆ.