‘ಭಾರತದಲ್ಲಿ ಅಂದಾಜು 1.2 ಕೋಟಿ ಮಂದಿ ಕಿರಾಣಿ ಅಂಗಡಿಗಳಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ಅವರು ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಇವರೆಲ್ಲಾ ಮನೆ ಮನೆಗೆ ಹೋಗಿ ದಿನಸಿ ಪೂರೈಸಿದ್ದಾರೆ. ಅವರಿಗೂ ಸೋಂಕು ತಗಲುವ ಅಪಾಯ ಇದೆ. ಹೀಗಾಗಿ ಲಸಿಕೆ ನೀಡಿ’ ಎಂದು ಮನವಿ ಪತ್ರದಲ್ಲಿ ಹೇಳಲಾಗಿದೆ.