ಬೆಂಗಳೂರು: ‘ಕೋವಿಡ್ ಎರಡನೇ ಅಲೆ ನಿಯಂತ್ರಿಸಲು ಲಾಕ್ಡೌನ್ ಘೋಷಿಸಿದರೆ, ಇಂದಿರಾ ಕ್ಯಾಂಟೀನ್ ಮೂಲಕ ಬಡವರಿಗೆ ಉಚಿತವಾಗಿ ಆಹಾರ ಪೂರೈಸಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಸಿಪಿಐ (ಎಂ) ಒತ್ತಾಯಿಸಿದೆ.
‘ಕರ್ಫ್ಯೂ, ಲಾಕ್ಡೌನ್ನಂತಹ ಕ್ರಮಗಳಿಂದ ಸಾವಿರಾರು ಅಸಂಘಟಿತ ಕಾರ್ಮಿಕರು ಕೆಲಸ ಮತ್ತು ಗಳಿಕೆ ಕಳೆದುಕೊಳ್ಳುತ್ತಿದ್ದಾರೆ. ಅವರಿಗೆ ಪ್ರತಿದಿನ ಮೂರು ಹೊತ್ತು ಉಚಿತ ಆಹಾರ ಪೂರೈಸಬೇಕು’ಎಂದು ಪಕ್ಷದ ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ.ಎನ್. ಉಮೇಶ್ ಆಗ್ರಹಿಸಿದ್ದಾರೆ.
‘ಆಹಾರ ಪೂರೈಸುವುದರ ಜೊತೆಗೆ ಪ್ರತಿ ಕುಟುಂಬಕ್ಕೆ ₹ 10 ಸಾವಿರ ನೇರ ನಗದು ವರ್ಗಾವಣೆ ಮಾಡುವ ಮೂಲಕ ಪರಿಹಾರ ನೀಡಬೇಕು’ ಎಂದೂ ಅವರು ಹೇಳಿದ್ದಾರೆ.
‘ರಾಜ್ಯದಲ್ಲಿ 2011ರ ಜನಗಣತಿ ಪ್ರಕಾರ 1.34 ಕೋಟಿ ಕುಟುಂಬಗಳಿವೆ. ಪ್ರತಿ ಕುಟುಂಬಕ್ಕೆ ಮಾಸಿಕ ₹ 10 ಸಾವಿರ ನೆರವು ನೀಡಲು ತಿಂಗಳಿಗೆ ₹ 13,400 ಕೋಟಿ ಅವಶ್ಯಕತೆ ಇದೆ. 2 ಲಕ್ಷ ಕೋಟಿ ರೂಪಾಯಿಗಳ ವಾಷಿ೯ಕ ಬಜೆಟ್ ಸಾಮಥ್ಯ೯ದ ಆಥಿ೯ಕತೆಗೆ ಇದು ದೊಡ್ಡ ಹೊರೆಯಾಗಲಾರದು’ ಎಂದೂ ಅವರು ಹೇಳಿದ್ದಾರೆ.