‘ಈ ವಿಚಾರ ಮೊದಲೇ ತಿಳಿದಿದ್ದ ದುಷ್ಕರ್ಮಿಗಳು, ಈತ ವಾಪಸ್ ಬರುವುದನ್ನೇ ಕಾದು ಹತ್ಯೆ ನಡೆಸಲು ಸಜ್ಜಾಗಿದ್ದರು.ರವಿವರ್ಮ ಬಂದ ಕೂಡಲೇ ದುಷ್ಕರ್ಮಿಗಳ ತಂಡ ಏಕಾಏಕಿ ದಾಳಿ ನಡೆಸಿದೆ. ಹತ್ಯೆ ನಂತರ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಹಳೆಯ ದ್ವೇಷದಿಂದ ಕೊಲೆ ಮಾಡಿರುವ ಶಂಕೆ ಇದೆ. ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ’ ಎಂದೂ ಪೊಲೀಸರು ಹೇಳಿದರು.