ಅಲ್ಲದೆ, ಮಂಜುನ ಪತ್ನಿ ಜೊತೆ ಸಂತೋಷ್ ಅನುಚಿತವಾಗಿ ವರ್ತಿಸುತ್ತಿದ್ದ. ಆತನ ನಡವಳಿಕೆಯಿಂದ ಬೇಸತ್ತ ದಂಪತಿ, ಸಂತೋಷ್ನನ್ನು ಹತ್ಯೆ ಮಾಡಲು ನಿರ್ಧರಿಸಿದ್ದರು. ಪೂರ್ವಯೋಜನೆಯಂತೆ, ಚೀಟಿ ವ್ಯವಹಾರದ ಬಗ್ಗೆ ಮಾತನಾಡಲು ನ. 15ರಂದು ರಾತ್ರಿ ಸಂತೋಷ್ನನ್ನು ಮನೆಗೆ ಕರೆಸಿಕೊಂಡಿದ್ದರು. ಸಂತೋಷ್ ಮನೆಗೆ ಬರುತ್ತಿದ್ದಂತೆ ಕೊಡಲಿಯಿಂದ ತಲೆಗೆ ಹೊಡೆದು
ಕೊಲೆ ಮಾಡಿದ್ದರು. ನಂತರ ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿಸಿ, ಯಾರಿಗೂ ಸಂದೇಹ ಬಾರದಂತೆ ಲಗ್ಗೆರೆಯ ಮೌಂಟ್ ಸೆನೋರಿಯಾ ಶಾಲೆಯ ಕಾಂಪೌಂಡ್ ಬಳಿ ಎಸೆದಿದ್ದರು ಎಂದು ಪೊಲೀಸರು ತಿಳಿಸಿದರು.