‘ರಂಜಿತ್ ಅವರು ಸಂಪಿಗೆಹಳ್ಳಿಯ ರೈಲ್ವೆ ಫ್ಯಾರಲಲ್ (ಆರ್.ಪಿ) ರಸ್ತೆಯಲ್ಲಿ ಬುಧವಾರ ರಾತ್ರಿ ನಡೆದುಕೊಂಡು ಹೊರಟಿದ್ದರು. ಅವರನ್ನು ಅಡ್ಡಗಟ್ಟಿದ್ದ ಇಬ್ಬರು ಆರೋಪಿಗಳು, ಮೊಬೈಲ್ ಹಾಗೂ ನಗದು ನೀಡು ವಂತೆ ಒತ್ತಾಯಿಸಿದ್ದರು. ಅದನ್ನು ರಂಜಿತ್ ವಿರೋಧಿಸಿದ್ದರು. ಸಿಟ್ಟಾದ ಆರೋಪಿಗಳು, ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದರು. ನಂತರ, ₹ 2,000 ಮೌಲ್ಯದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ’ ಎಂದು ತಿಳಿಸಿವೆ.