‘ಆರೋಪಿಗಳ ವಿರುದ್ಧ ಬಸವೇಶ್ವರನಗರ, ಜಯನಗರ, ಬೇಗೂರು, ಪರಪ್ಪನ ಅಗ್ರಹಾರ, ಕಾಡುಗೋಡಿ, ಕೆ.ಆರ್.ಪುರ, ಬೆಳ್ಳಂದೂರು ಸೇರಿದಂತೆ ಅನೇಕ ಠಾಣೆಗಳಲ್ಲಿ ಕನ್ನ–ಕಳವು ಪ್ರಕರಣಗಳು ದಾಖಲಾಗಿದ್ದವು. ಕೆಲವು ಪ್ರಕರಣಗಳಲ್ಲಿ ಜೈಲುವಾಸವನ್ನೂ ಅನುಭವಿಸಿದ್ದರು. ಜಾಮೀನಿನ ಮೇಲೆ ಹೊರಬಂದ ನಂತರವೂ ಕೃತ್ಯ ಮುಂದುವರಿಸಿದ್ದರು. ರಾತ್ರಿ ವೇಳೆ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಇವರು, ಮೋಜಿನ ಜೀವನ ನಡೆಸುತ್ತಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.