‘ಏಪ್ರಿಲ್ 4ರಂದು ಆರೋಪಿ ದ್ವಿಚಕ್ರ ವಾಹನದಲ್ಲಿ ಕೊಟ್ಟಿಗೆಪಾಳ್ಯ ಬಳಿ ತೆರಳುತ್ತಿದ್ದ. ಅದೇ ರಸ್ತೆಯಲ್ಲಿ ಸಿಬ್ಬಂದಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಆರೋಪಿ ವಾಹನ ನಿಲ್ಲಿಸಿ ದಾಖಲೆ ಕೇಳಿದ್ದರು. ಆದರೆ, ಆತ ದಾಖಲೆ ನೀಡಿರಲಿಲ್ಲ. ವಾಹನ ಸಮೇತ ಆರೋಪಿಯನ್ನು ಠಾಣೆಗೆ ಕರೆತಂದು ವಿಚಾರಿಸಿದಾಗ ಕೃತ್ಯ ಬಾಯ್ಬಿಟ್ಟ.’ ‘ವಿಜಯನಗರ, ಮಾದನಾಯಕನಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಆರೋಪಿ ವಾಹನಗಳನ್ನು ಕದ್ದಿರುವ ಮಾಹಿತಿ ಇದೆ’ ಎಂದೂ ಪೊಲೀಸರು ಹೇಳಿದರು.