ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುಮಾನದ ಕಾರು ನಂಬಿ ₹ 68 ಸಾವಿರ ಕಳೆದುಕೊಂಡರು

Last Updated 21 ಆಗಸ್ಟ್ 2020, 20:38 IST
ಅಕ್ಷರ ಗಾತ್ರ

ಬೆಂಗಳೂರು: ಆನ್‌ಲೈನ್‌ ಮಾರ್ಕೆಟ್ ಕಂಪನಿ ಹೆಸರಿನಲ್ಲಿ ಕಾರು ಬಹುಮಾನ ಬಂದಿರುವುದಾಗಿ ಹೇಳಿ ವ್ಯಕ್ತಿಯೊಬ್ಬರಿಂದ ₹ 68 ಸಾವಿರ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಕೇಂದ್ರ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈಜಿಪುರ ನಿವಾಸಿ ಆ್ಯಂಟೋನಿ ರಾಜು ಎಂಬುವರು ದೂರು ಕೊಟ್ಟಿದ್ದಾರೆ.

‘ಆ್ಯಂಟೋನಿ ಅವರಿಗೆ ಕರೆ ಮಾಡಿದ್ದ ವಂಚಕ, ತಾನು ಆನ್‌ಲೈನ್ ಮಾರ್ಕೆಟ್ ಕಂಪನಿ ನೌಕರ. ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ ಲಕ್ಕಿ ಡ್ರಾನಲ್ಲಿ ನಿಮಗೆ ಕಾರು ಬಹುಮಾನ ಬಂದಿದೆ. ಜಿಎಸ್‌ಟಿ ಹಾಗೂ ಶುಲ್ಕ ಪಾವತಿಸಿದರೆ ಕಾರು ನೀಡುತ್ತೇವೆ ಎಂಬುದಾಗಿ ತಿಳಿಸಿದ್ದ’ ಪೊಲೀಸರು ತಿಳಿಸಿದರು.

‘ವಂಚಕನ ಮಾತು ನಂಬಿದ್ದ ಆ್ಯಂಟೋನಿ, ಆತ ಸೂಚಿಸಿದ್ದ ವಿವಿಧ ಬ್ಯಾಂಕ್‌ಗಳ ಖಾತೆಗಳಿಗೆ ಹಣ ಪಾವತಿ ಮಾಡಿದ್ದರು. ಅದಾದ ನಂತರ ಆರೋಪಿಗಳು ನಾಪತ್ತೆಯಾಗಿದ್ದಾರೆ’ ಎಂದೂ ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT