‘ಇಷ್ಟಕ್ಕೆ ಮಳೆ ನಿಂತರೆ ರಾಗಿ ಗುಣಮಟ್ಟ ಸರಿಯಾಗಿಲ್ಲದಿದ್ದರೂ ರಾಗಿ, ಹುಲ್ಲು ಮನೆ ಸೇರುವ ನಂಬಿಕೆ ಇದೆ. ಆದರೆ, ಮಳೆ ಇನ್ನೆರಡು ಮೂರು ದಿನಗಳ ಕಾಲ ಮುಂದುವರಿದರೆ ರಾಗಿ, ಹುಲ್ಲು ಯಾವುದೇ ಪ್ರಾಣಿಗಳು ತಿನ್ನಲು ಸಾಧ್ಯವಿಲ್ಲದಂತಾಗಿ ಕೊಯಿಲು ಮಾಡದೆ ಹೊಲದಲ್ಲೇ ಬಿಡುವ ಸ್ಥಿತಿ ಬರಲಿದೆ‘ ಎನ್ನುತ್ತಾರೆ ಸಾಲಹಟ್ಟಿಯ ಮಲ್ಲಯ್ಯ.