ದಾಬಸ್ಪೇಟೆ: ಆರ್ಥಿಕ ದುರ್ಬಲರು ಹಾಗೂ ಅಂಗವಿಕಲರಿಗೆಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಸೋಂಪುರ ಹೋಬಳಿ ನರಸೀಪುರ ಗ್ರಾಮದಲ್ಲಿ ಮಾಸಾಶನ ವಿತರಣೆ ಮಾಡಲಾಯಿತು.
ಮಾನವ ಚಾರಿಟೀಸ್ನ ಎಚ್.ಬಿ. ನಾಗಭೂಷಣ, ‘ಕೋವಿಡ್ ಬಿಕ್ಕಟ್ಟಿನಿಂದ ನಿರ್ಗತಿಕರು ಜೀವನ ನಡೆಸುವುದು ಕಷ್ಟವಾಗಿದೆ. ಅದನ್ನು ಮನಗಂಡು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ತಾಲ್ಲೂಕಿನ ಉದ್ದಕ್ಕೂ ಇರುವ ಅರ್ಹ ನಿರ್ಗತಿಕರನ್ನು ಗುರುತಿಸಿ ಜೀವನ ನಿರ್ವಹಣೆಗೆ ಮಾಸಾಶನ ನೀಡುತ್ತಿರುವುದು ಸಂತೋಷದ ಸಂಗತಿ’ ಎಂದರು.
ಸಂಸ್ಥೆಯ ಪದಾಧಿಕಾರಿಗಳಾದ ರಮೇಶ್, ಚಕ್ರವರ್ತಿ ರಘುನಂದನ್, ರಾಜಣ್ಣ, ಮಂಜುನಾಥ್ ಪ್ರಸಾದ್, ವಿನೋದ್ ಉಪಸ್ಥಿತರಿದ್ದರು.